ಮಂಗಳೂರು: ಔಷಧ ಖರೀಧಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಆಧಾರ ರಹಿತವಾಗಿದ್ದು ಯಾವುದೇ ತನಿಖೆಗೆ ಸಿದ್ಧನಿದ್ದೇನೆ. ಆರೋಪ ಸಾಬೀಧಿತಾದರೆ ನನ್ನ ಹುದ್ದೆಗೆ ರಾಜೀನಾಮೆ ನೀಡುವುದು ಮಾತ್ರವಲ್ಲ; ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತೇನೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರಮೇಶ್ ಮಾಡಿರುವ ಆರೋಪಗಳು ಸಂಪೂರ್ಣ ನಿರಾಧಾರವಾಗಿದ್ದು ರಾಜಕೀಯ ಪ್ರೇರಿತ ಹಾಗೂ ಆರೋಗ್ಯ ಇಲಾಖೆಗೆ ಕಪ್ಪು ಚುಕ್ಕೆ ತರುವ ಪ್ರಯತ್ನವಾಗಿದೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆಯೂ ಚಿಂತನೆ ನಡೆಸಿದ್ದೇನೆ ಎಂದರು.ಔಷಧ ಖರೀದಿ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ. ಔಷಧ ನಿಯಂತ್ರಣ ಮಂಡಳಿಯಲ್ಲಿ ನೋಂದಣಿ ಮಾಡಿದ 81 ಕಂಪೆನಿಗಳ ಔಷಧವೇ ಖರೀದಿಯಾಗುತ್ತದೆ. ಮಂಡಳಿಯ ಮಾರ್ಗಸೂಚಿಯಂತೆಯೇ ಖರೀದಿಯಾಗುತ್ತದೆ ಮತ್ತು ಡ್ರಗ್ ಲಾಜಿಸ್ಟಿಕ್ ಇದನ್ನು ನೋಡಿಕೊಳ್ಳುತ್ತದೆ. ಆರೋಪ ಮಾಡಿರುವವರು ಇದನ್ನೆಲ್ಲ ಪರಿಶೀಲಿಸಲಿ ಎಂದ ಅವರು ಆರೋಪಗಳೆಲ್ಲವೂ ಬಿಬಿಎಂಪಿಗೆ ಸಂಬಂಧಪಟ್ಟದ್ದು. ಆರೋಗ್ಯ ಇಲಾಖೆಗೆ ಸಂಬಂಧಪಟ್ಟದಲ್ಲ. ಈ ಬಗ್ಗೆ ತನಿಖೆ ನಡೆಸುವಂತೆ ಮೇಯರ್ ಅವರಿಗೆ ಸೂಚಿಸಿದ್ದೇನೆ ಎಂದು ಸಚಿವರು ವಿವರಿಸಿದರು.