ಮಂಗಳೂರು: ಚಲಿಸುತ್ತಿದ್ದ ಲಾರಿ ಮೇಲೆ ಮರ ಉರುಳಿ ಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ದ.ಕ.ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಡೆದಿದೆ.ಪುತ್ತೂರು ಕಡೆಯಿಂದ ಸುಳ್ಯದತ್ತ ಬರುತ್ತಿದ್ದ ಲಾರಿ ಓಡಬಾಯಿ ಸಮೀಪಿಸುತ್ತಿದ್ದಂತೆ ರಸ್ತೆ ಬದಿ ಇದ್ದ ಬೃಹತ್ ಗಾತ್ರದ ಹಲಸಿನ ಮರವೊಂದು ಲಾರಿ ಮೇಲೆ ಬುಡಸಮೇತ ಉರುಳಿ ಬಿತ್ತು.
ಸರಿಯಾಗಿ ಕ್ಯಾಬಿನ್ ಮೇಲೆಯೆ ಉರುಳಿದ್ದರಿಂದ ಲಾರಿಯೊಳಗೆ ಸಿಲುಕಿದ ಚಾಲಕ ಮಹಮ್ಮದ್ ಸ್ಥಳದಲ್ಲೆ ಮೃತಪಟ್ಟರೆ, ಕ್ಲೀನರ್ ಸವಾದ ಗಂಭೀರವಾಗಿ ಗಾಯಗೊಂಡವರು. ಘಟನಾ ಸ್ಥಳಕ್ಕೆ ಶಾಸಕ ಅಂಗಾರ ಸಹಿತ ಗಣ್ಯರು ಭೇಟಿ ನೀಡಿದ್ದಾರೆ.