ಮುಂಬಯಿ (ಮಂಗಳೂರು), ಜು.02: ಕಲ್ಕೂರ ಪ್ರತಿಷ್ಠಾನದಆಶ್ರಯದಲ್ಲಿ ಶಂಭು ಶಿಷ್ಯ ಯಕ್ಷಗಾನ ಪ್ರತಿಷ್ಠಾನ (ರಿ) ಕಲ್ಲಗದ್ದೆ ತಂಡದವರಿಂದ ನಗರದ ಡಾನ್ಬಾಸ್ಕೋ ಹಾಲ್ನಲ್ಲಿ ಮೂರು ದಿನದ `ಯಕ್ಷತ್ರಿಕೂಟ ಸಂಭ್ರಮ' ಕಾರ್ಯಕ್ರಮ ಉದ್ಘಾಟನೆಗೊಂಡಿತು. ಹಿರಿಯಯಕ್ಷಗಾನಕಲಾವಿದ, ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಕುಂಬ್ಳೆ ಸುಂದರ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಹರಿಕೃಷ್ಣ ಪುನರೂರು ಮತ್ತು ಶ್ರೀಮತಿ ಭುವನೇಶ್ವರಿ ಹೆಗಡೆ ಅತಿಥಿüಗಳಾಗಿ ಪಾಲ್ಗೊಂಡಿದ್ದರು. ಕೆರೆಮನೆ ಶಾರದಾ ಹೆಗಡೆ, ಜಿ.ಕೆ ಭಟ್ ಸೇರಾಜೆ, ಎಸ್.ಎಂ ಹೆಗಡೆ, ಜನಾರ್ದನ ಹಂದೆ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭಕೆರೆಮನೆ ಶಂಭುಹೆಗಡೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯ್ತು. ಉದ್ಘಾಟನೆಯ ಬಳಿಕ `ಕೃಷ್ಣಾರ್ಜುನ' ಯಕ್ಷಗಾನ ಬಯಲಾಟಜರಗಿತು.