ಮುಂಬಯಿ, ಆ.07: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ನಾಟಕಕಾರ ಬೋಳ ಚಿತ್ತರಂಜದಾಸ್ ಶೆಟ್ಟಿ (72.) ಇಂದಿಲ್ಲಿ ಭಾನುವಾರ ಸಂಜೆ ತನ್ನ ಸ್ವನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.
ಮೂಲತಃ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ಕಾರ್ಕಳ ಬೋಳ ಗ್ರಾಮದವರಾಗಿದ್ದು, ಪರ್ತಿಮಾರ್ಗುತ್ತು ಮಂಜಯ್ಯ ಶೆಟ್ಟಿ ಮತ್ತು ಬೋಳ ಮಾತ್ರೆಂಗಿಪರಾರಿ ರುಕ್ಮಿಣಿ ಶೆಟ್ಟಿ ದಂಪತಿ ಪುತ್ರರಾಗಿದ್ದು ಬಾಲ್ಯವನ್ನು ಮುಂಬಯಿಯಲ್ಲಿ ಕಳೆದಿದ್ದರು. ಮೃತರು ಪತ್ನಿ, ಇಬ್ಬರು ಸುಪುತ್ರರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಉಡುಪಿ ಸೋದೆ ಮಠದ ಪರ್ಯಾಯದ ವೇಳೆ ಶ್ರೀ ಕೃಷ್ಣ ವಾದಿರಾಜನುಗ್ರಹ ಪ್ರಶಸ್ತಿ, ತುಳು ಗೌರವ ಇತ್ಯಾದಿ ನೂರಾರು ಗೌರವಗಳಿಂದ ಪುರಸ್ಕಾರಗಳಿಂದಲೂ ತುಳು-ಕನ್ನಡ ಲೇಖಕರಾಗಿದ್ದು 2010ರಲ್ಲಿ ಜರುಗಿದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್ನ ಅಧ್ಯಕ್ಷರಾಗಿದ್ದರು. ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪ್ರಭಾಕರ್ ಎಲ್.ಶೆಟ್ಟಿ, ಹೆಚ್.ಬಿ ಎಲ್ ರಾವ್, ಕಲಾಜಗತ್ತು ವಿಜಯಕುಮಾರ್ ಶೆಟ್ಟಿ, ಡಾ| ಸುನೀತಾ ಎಂ.ಶೆಟ್ಟಿ, ಜಯ ಸಿ.ಸುವರ್ಣ, ನಿತ್ಯಾನಂದ ಡಿ.ಕೋಟ್ಯಾನ್, ಎಲ್.ವಿ ಅಮೀನ್, ಪ್ರದೀಪ್ಕುಮಾರ್ ಕಲ್ಕೂರ, ಶಿಮುಂಜೆ ಪರಾರಿ, ರತ್ನಾಕರ್ ಆರ್.ಶೆಟ್ಟಿ ಸೇರಿದಂತೆ ಅನೇಕ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಪದಾಧಿಕಾರಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.