ಕುಂದಾಪುರ, ಅ.15: ಕುಂದಾಪುರದ ಚಿಕ್ಕನ್ಸಾಲ್ ರಸ್ತೆಯಲ್ಲಿರುವ ಕೋಸ್ತಾ ಕಾಂಪ್ಲೆಕ್ಸ್ ಪರಿಸರದ ಹಲವಾರು ವ್ಯಾಪರಿಗಳು, ಕಟ್ಟಡ ಮಾಲೀಕರು ಒಟ್ಟು ಸೇರಿ ಕೋಸ್ತಾ ಕಾಂಪ್ಲೆಕ್ಸ್ ಆವರಣದಲ್ಲಿ 70 ನೇಯ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಸೇರೆಗಾರ್ ಕಾಂಪ್ಲೆಕ್ಸನ್ ಮ್ಹಾಲಕರಾದ ಕೆ.ವಿಠಲ್ ಸೇರೆಗಾರ್ ಧ್ವಜಾ ರೋಹಣ ಮಾಡಿದರು. ಕೋಸ್ತಾ ಕಾಂಪ್ಲೆಕ್ಸ್ ಪಾಲುದಾರ, ಸಾಹಿತಿ ಪತ್ರಕರ್ತ ಬರ್ನಾಡ್ ಡಿಕೋಸ್ತಾ, ‘ನಾವೆಲ್ಲಾ ಜಾತಿ ಧರ್ಮ ಮರೆತು ನಾವೆಲ್ಲಾ ಒಂದೆ ತಾಯಿಯ ಮಕ್ಕಳಂತ್ತೆ ಅನ್ಯೊನೆತೆಯಿಂದ ಜೀವಿಸಿದರೆ, ನಮ್ಮ ಹಿರಿಯರು ಬಹಳ ಕಶ್ಟ ಪಟ್ಟು ನಮಗೆ ಗಳಿಸಿಕೊಟ್ಟ ಸ್ವಾತಂತ್ರಕ್ಕೆ ನಿಜವಾದ ಫಲ ಸಿಗುತ್ತದೆಂದು’ ಸಂದೇಶ ನೀಡಿದರು. ಅತಿಥಿಗಳಾಗಿ ಕೋಸ್ತಾ ಕಾಂಪ್ಲೆಕ್ಷನ ಪಾಲುದಾರಾರ ವಿಜಯ್ ಡಿಕೋಸ್ತಾ, ಲೋಬೊ ಕಾಂಪ್ಲೆಕ್ಷನ ಜೋಸೆಫ್ ಲೋಬೊ, ಶರ್ಮೀಳಾ ಡಿಕೋಸ್ತಾ, ವೇದಿಕೆಯಲ್ಲಿದ್ದರು.
ವ್ಯಾಪರಿಗಳಾದ ರವೀಂದ್ರ, ಗೀರಿಶ, ದಿನಕರ, ಗಣೇಶ್, ರಿಚ್ಚರ್ಡ್ ಕರ್ವಾಲ್ಲೊ, ಅವಿನಾಶ್, ವಿಜಯ್, ಚೇತನ್, ಸಂದೀಪ್, ಮೋಹನ, ರಮೇಶ್, ಸಂತೋಷ್, ಮಂಜುನಾಥ ಮತ್ತಿತರರು ಕಾರ್ಯಕ್ರಮದ ನೇತ್ರತ್ವ ವಹಿಸಿದ್ದರು, ಕಾರ್ಯಕ್ರಮವನ್ನು ಅನ್ವಿತ್ ಶೆಟ್ಟಿ ನೆಡೆಸಿಕೊಟ್ಟರು. ವಿನಯಾ ಡಿಕೋಸ್ತಾ ವಂದಿಸಿದರು