ಮಂಗಳೂರು: ದೇಶಭಕ್ತಿ ಆಧಾರಿತ, ಕರಾವಳಿಯಲ್ಲಿ ಚಿತ್ರೀಕರಣಗೊಂಡ ಭಾರತ್ ಮಾತಾ ಕೀ ಜೈ ಹಿಂದಿ ಕಿರುಚಿತ್ರವನ್ನು ಆ. 15ರಂದು ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಹೊಸದಿಲ್ಲಿಯಲ್ಲಿ ಬಿಡುಗಡೆ ಮಾಡಿದರು.
ಜನ್ಮ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ಪುತ್ತೂರಿನ ಡಾ| ಹರ್ಷಕುಮಾರ್ ರೈ ಮಾಡಾವು ನಿರ್ಮಾಣದಲ್ಲಿ ಮೂಡಿಬಂದಿರುವ ಈ ಕಿರುಚಿತ್ರಕ್ಕೆ ಪ್ರಮಿತ್ರಾಜ್ ಕಟ್ಟತ್ತಾರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದು, ನವೀನ್ ನೇರಳೊಡಿ ನಿರ್ದೇಶನ ಮಾಡಿದ್ದಾರೆ. ಅರುಣ್ ರೈ ಪುತ್ತೂರು ಛಾಯಾಗ್ರಹಣ ಮಾಡಿದ್ದಾರೆ. ಮಂಗಳೂರಿನ ಸುತ್ತಮುತ್ತ ಚಿತ್ರೀಕರಣಗೊಂಡ ಈ ಕಿರುಚಿತ್ರದಲ್ಲಿ ಜಿಲ್ಲೆಯ ಹಲವು ಯುವ ಪ್ರತಿಭೆಗಳು ಬಣ್ಣಹಚ್ಚಿದ್ದಾರೆ.