Friday 26th, April 2024
canara news

ಕೊಲೆ ಯತ್ನ : ಪ್ರಮುಖ ಆರೋಪಿಗಳ ಸೆರೆ

Published On : 26 Aug 2016   |  Reported By : Canaranews Network


ಮಂಗಳೂರು: ಹಿಂದೂ ಜಾಗರಣ ವೇದಿಕೆಯ ಮುಖಂಡ ಸಂದೀಪ್ ಶೆಟ್ಟಿ ಕೊಲೆ ಯತ್ನ ಮತ್ತು ಹಲವು ಪ್ರಕರಣಗಳಿಗೆ ಸಂಬಂಧಿಸಿ 3 ತಿಂಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಗಳಾದ ವಿಜಯ ಯಾನೆ ಮಂಕಿ ಸ್ಟಾಂಡ್ ವಿಜಯ್ (30), ಗೋರಿಗುಡ್ಡೆಯ ಮೆಲಿಕ್ ಯಾನೆ ಮೆಲಿಕ್ ಡಿ'ಸೋಜಾ (20) ಮತ್ತು ಕೋಡಿಕಲ್ನ ಪ್ರವೀಣ್ ಯಾನೆ ಚೋಟು (23) ಅವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಆಯುಕ ಎಂ. ಚಂದ್ರಶೇಖರ್ ಅವರು ಬುಧವಾರ ಇಲ್ಲಿ ಪತ್ರಿಕಾಗೋಷ್ಟಿಯಲ್ಲಿ ಈ ವಿಷಯ ತಿಳಿಸಿದರು. ಡಿಸಿಪಿಗಳಾದ ಶಾಂತರಾಜು, ಡಾ | ಸಂಜೀವ್ ಪಾಟೀಲ್, ಎಸಿಪಿ ಶ್ರುತಿ ಅವರು ಉಪಸ್ಥಿತರಿದ್ದರು.

ಮಾರ್ನಮಿಕಟ್ಟೆಯ ಸಂದೀಪ್ ಶೆಟ್ಟಿಯನ್ನು ಮಂಕಿ ಸ್ಟಾಂಡ್ ವಿಜಯ್ ಹಾಗೂ ಆತನ ಸಹಚರರು 2016 ಮೇ 16 ರಂದು ಮಧ್ಯಾಹ್ನ ಮಾರ್ನಮಿಕಟ್ಟೆ ಪಾರ್ಕಿಂಗ್ ಬಳಿಯಿಂದ ಬೆನ್ನಟ್ಟಿ, ತಲವಾರುಗಳಿಂದ ಕಡಿದು, ಮಾರಣಾಂತಿಕ ಗಾಯಗೊಳಿಸಿ, ಕೊಲೆ ನಡೆಸಲು ಪ್ರಯತ್ನಿಸಿದ್ದರು.ಐವರು ಆರೋಪಿಗಳಾದ ನಿಖೀಲ್ ಶೆಟ್ಟಿ ಯಾನೆ ಎಲಿ, ಅಣ್ಣಯ್ಯ ಯಾನೆ ಅಣ್ಣು, ಧನರಾಜ್ ಯಾನೆ ಧನು, ಅಭೀಷೇಕ್ ಮತ್ತು ಸಂಪತ್ ಬಂಗೇರ ಅವರನ್ನು ಬಂಧಿಸಲಾಗಿತ್ತು. ಆದರೆ, ಪ್ರಮುಖ ಆರೋಪಿ ಗಳಾದ ವಿಜಯ್ ಯಾನೆ ಮಂಕಿ ಸ್ಟಾಂಡ್ ವಿಜಯ್, ಮೆಲಿಕ್ ಮತ್ತು ಪ್ರವೀಣ್ ಯಾನೆ ಚೋಟು ತಲೆಮರೆಸಿಕೊಂಡಿದ್ದರು. ಮಂಗಳವಾರ ಬೆಳಗಾವಿ ಜಿಲ್ಲೆಯ ರಾಯ್ಭಾಗ್ ತಾಲೂಕಿನ ಬೆಕ್ಕೇರಿ ಎಂಬಲ್ಲಿ ಆರೋಪಿಗಳನ್ನು ಬಂಧಿಸಿದೆ ಎಂದು ಅವರು ತಿಳಿಸಿದರು

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here