ಮಂಗಳೂರು: ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ ಯುವತಿಯೋರ್ವಳು ಮಾವ, ನಾದಿನಿಯರು ಹಾಗೂ ಬಾವನ ಕಿರುಕುಳದಿಂದ ಬೇಸತ್ತು ವಿಷಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆೊರವಲಯದ ಮಂಗಳೂರು ಹ್ಮೂಡುಮಾರ್ನಾಡ್ನಲ್ಲಿ ನಡೆದಿದ್ದು ಈ ಬಗ್ಗೆ ಆಕೆಯ ತಾಯಿ ಮೂಡಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪತಿ ಸಹಿತ ಆರೋಪಿಗಳೆಲ್ಲರೂ ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ. ಬೆಳ್ತಂಗಡಿ ಕನ್ಯಾಡಿಯ ವಿಮಲಾಕ್ಷಿ ಶೆಟ್ಟಿ ಅವರ ಪುತ್ರಿ, ಎಂಎಸ್ಡಬ್ಲ್ಯುಪದವೀಧರೆ ಸ್ವಾತಿ ಶೆಟ್ಟಿ (25) ಆತ್ಮಹತ್ಯೆ ಮಾಡಿಕೊಂಡಾಕೆ. ಗಂಡ ಶರತ್ಚಂದ್ರ, ಮಾವ ಭೋಜ ಶೆಟ್ಟಿ, ನಾದಿನಿಯರಾದ ಸರಿತಾ, ಸಂಗೀತಾ ಮತ್ತು ಗಂಡನ ಅಣ್ಣ ಸದನ್ ಇವರು ಆರೋಪಿಗಳಾಗಿದ್ದಾರೆ
ಘಟನೆ ವಿವರ:
ಸ್ವಾತಿ ಶೆಟ್ಟಿ ಅವರ ವಿವಾಹವು ಮೂಡಬಿದಿರೆ ಸಮೀಪದ ಮೂಡು ಮಾರ್ನಾಡಿನ ದರ್ಖಾಸು ಮನೆಯ ಭೋಜ ಶೆಟ್ಟಿ ಅವರ ಪುತ್ರ ಶರತcಂದ್ರ ಅವರೊಂದಿಗೆ 2014ರಲ್ಲಿ ನಡೆದಿತ್ತು. ರೂ. 5 ಲಕ್ಷ ನಗದು ನೀಡಲಾಗಿತ್ತು ಮತ್ತು 30 ಪವನ್ ಚಿನ್ನ ಹಾಕಲಾಗಿತ್ತು. ಮದುವೆಯಾದ ಒಂದು ತಿಂಗಳಿ ನಲ್ಲಿಯೇ ಶರತcಂದ್ರ ಅವರು ವಿದೇಶಕ್ಕೆ ತೆರಳಿದ್ದರು. ಎಂಎಸ್ಡಬ್ಲ್ಯು ಸ್ವಾತಿ ಎರಡು ವಾರಗಳ ಹಿಂದೆ ಮಂಗಳೂರಿನಲ್ಲಿ ನೌಕರಿಗೆ ಸೇರಿ ನಿತ್ಯ ಹೋಗಿ ಬರುತ್ತಿದ್ದರು.
ತನ್ನ ಬಗ್ಗೆ ಮಾವ ಭೋಜ ಶೆಟ್ಟಿ ಅವರು ಸಂಶಯದಿಂದಲೇ ನೋಡುತ್ತಿರುವ ಬಗ್ಗೆ ಮತ್ತು ವರದಕ್ಷಿಣೆ ಕಿರುಕುಳದ ಬಗ್ಗೆ ಆಕೆ ತಾಯಿಯಲ್ಲಿ ಹೇಳಿಕೊಂಡಿದ್ದರು; ಹೀಗೆಯೇ ಆಗಸ್ಟ್ 13ರಂದು ಸ್ವಾತಿ ತನ್ನ ತಾಯಿ ಮನೆಗೆ ಹೋಗಿದ್ದಾಗಲೂ ಮಾವನ ಕಿರುಕುಳದ ಬಗ್ಗೆ ತಿಳಿಸಿದ್ದರು ಎನ್ನಲಾಗಿದೆ. ಆದರೆ ವರದಕ್ಷಿಣೆಗಾಗಿ ಕಿರುಕುಳ ನೀಡಿ ತನ್ನ ಮಗಳು ಸಾವನ್ನಪ್ಪುವಂತೆ ಮಾಡಿದ್ದಾರೆಂದು ಆರೋಪಿಸಿ ಸ್ವಾತಿಯ ತಾಯಿ ವಾರಿಜಾ ಅವರು ಶುಕ್ರವಾರ ದೂರು ನೀಡಿದ್ದಾರೆ. ಸ್ವಾತಿ ಶೆಟ್ಟಿಯ ಪತಿ ಶರತ್ಚಂದ್ರ ಅವರೂ ಊರಿಗೆ ಬಂದಿದ್ದಾರೆ. ಮೂಡಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.