ಮಾಹಿಮ್ ಪಶ್ಚಿಮದಲ್ಲಿ ವೈದ್ಯಕೀಯ ಸೌಲತ್ತುಗಳ ಸೇವಾರ್ಪಣೆ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)
ಮುಂಬಯಿ, ಫೆ.20: ಜೆ.ಎನ್ ವಾಡಿಯಾ ಚಾರಿಟೇಬಲ್ ಡಿಸ್ಪೆನ್ಸರಿ ಟ್ರಸ್ಟ್ ಮತ್ತು ಜಿಎಸ್ಬಿ ಮೆಡಿಕಲ್ ಟ್ರಸ್ಟ್ಗಳ ಸಂಯುಕ್ತ ಆಶ್ರಯದಲ್ಲಿ ಇಂದಿಲ್ಲಿ ಭಾನುವಾರ ಪೂರ್ವಾಹ್ನ ಮಾಹಿಮ್ ಪಶ್ಚಿಮದ ಸಿತ್ಲಾ ದೇವಿ ಮಂದಿರದ ಸನಿಹದಲ್ಲಿನ ಜೆ.ಎನ್ ವಾಡಿಯಾ ಚಾರಿಟೇಬಲ್ ಡಿಸ್ಪೆನ್ಸರಿಯಲ್ಲಿ ವೈದ್ಯಕೀಯ ಸೌಲತ್ತುಗಳ ಸೇವಾರ್ಪಣೆಗೈದವು.
ಡಾ| ಬಿ.ಎಂ ಆಚಾರ್ಯ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್ನ ವಿಶ್ವಸ್ಥೆ ಶ್ರೀಮತಿ ಮೀರಾ ಎಂ.ಆಚಾರ್ಯ ದೀಪ ಬೆಳಗಿಸಿ ವೈದ್ಯಕೀಯ ಸೇವೆಗಳಿಗೆ ರಿಬ್ಬನ್ ಕತ್ತರಿಸಿ ನಂತರ ದೀಪ ಪ್ರಜ್ವಲಿಸಿ ಚಾಲನೆಯನ್ನೀಡಿದರು. ಈ ಸಂದರ್ಭದಲ್ಲಿ ಅತಿಥಿüಗಳಾಗಿ ಜೆಎನ್ಡಬ್ಲ್ಯೂಟಿ ಕಾರ್ಯಾಧ್ಯಕ್ಷ ಡಾ| ಪ್ರವೀಣ್ ಆಚಾರ್ಯ, ಜಿಎಸ್ಬಿಎಂಟಿ ಅಧ್ಯಕ್ಷ ಡಾ| ಸುಹಾಸ್ ವಿ.ಪ್ರಭು, ಜಿಎಸ್ಬಿ ಸಾರ್ವಜನಿಕ ಉತ್ಸವ ಗಣೋಶ್ಸವ ಸಮಿತಿ ವಡಲಾ ಇದರ ಅಧ್ಯಕ್ಷ ಎನ್.ಎನ್ ಪಾಲ್ ಉಪಸ್ಥಿತರಿದ್ದು ಈ ವೈದ್ಯಕೀಯ ಸೆಂಟರ್ಗೆ ಜಗನ್ನಾಥ ಪ್ರಭು ದಂಪತಿಯು ಡೆಂಟಲ್ ಚೇರ್ ಮತ್ತು ಗಣೇಶ್ ಶ್ಯಾನ್ಭಾಗ್ ಕಂಪ್ಯೂಟರ್ನೀಡಿದರು.
ಡಾ| ಪ್ರವೀಣ್ ಆಚಾರ್ಯ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು.ಜಿಎಸ್ಬಿಎಂಟಿ ಕೋಶಾಧಿಕಾರಿ ಗೀತಾ ಆರ್.ಪ್ರಭು ವಂದಿಸಿದರು.