ಜೈ ಕರ್ನಾಟಕ ಚಿಲ್ಲರೆ ಮೀನು ವ್ಯಾಪಾರಸ್ಥರ ವಿವಿದೋದ್ಧೇಶ ಸಹಕಾರ ಸಂಘ ರಿ. ಕುಂದಾಪುರ ಇದರ 2016-17 ರಿಂದ 2020-21 ರವರೆಗಿನ ಆಡಳಿತ ಮಂಡಳಿ ಚುನಾವಣೆಯು ದಿನಾಂಕ 20-08-2016ರಂದು ಸಂಘದ ಮುಖ್ಯ ಕಛೇರಿಯಲ್ಲಿ ಚುನಾವಣಾಧಿಕಾರಿಯಾಗಿದ್ದ ಕೆ.ಆರ್.ರೋಹಿತ್ ಇವರ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆಯಾಗಿ, ದಿನಾಂಕ 31-08-2016ರಂದು ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಸಂಘದ ಅಧ್ಯಕ್ಷರಾಗಿ ಆರ್.ಮಂಜುನಾಥ ಬಾಳಿಕೆರೆ, ಉಪಾಧ್ಯಕ್ಷರಾಗಿ ಅಸ್ಲಾಂ ಸಾಹೇಬ್ ಗಂಗೊಳ್ಳಿ ಪುನರಾಯ್ಕೆಯಾದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಬಾಬು ಮೊಗವೀರ, ಎಮ್.ಆರೀಫ್, ಮಂಜು ಪೂಜಾರಿ, ಹುಸೇನ್ ಸಾಹೇಬ್, ಶಿವಾನಂದ, ರತ್ನಾ ಕೋಟೇಶ್ವರ, ಸುಶೀಲಾ ಗುಡ್ಡೆಂಗಡಿ, ಸಾಧು ಕುಂದಾಪುರ, ಶಾರದಾ ಖಾರ್ವಿ ಕೋಡಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಮರವಂತೆ ಉಪಸ್ಥಿತರಿದ್ದರು.
ಅಧ್ಯಕ್ಷರು ಉಪಾಧ್ಯಕ್ಷರು
ಆರ್ ಮಂಜುನಾಥ ಬಾಳಿಕೆರೆ ಅಸ್ಲಾಂ ಸಾಹೇಬ್