ಮಂಗಳೂರು: ಕಾವೇರಿ ನೀರು ಹಂಚಿಕೆ ವಿವಾದ ಸುಖಾಂತ್ಯಕ್ಕೆ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಉರುಳು ಸೇವೆ ನಡೆಸಿದರು. ಉರುಳು ಸೇವೆ ನಡೆಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿ ಜನಾರ್ದನ ಪೂಜಾರಿ, ಸುಪ್ರೀಂ ತೀರ್ಪಿನ ಹಿನ್ನೆಲೆಯಲ್ಲಿ ಮೂರು ರಾಜ್ಯಗಳು ಕಚ್ಚಾಡುತ್ತಿವೆ.ಇದರಿಂದಾಗಿ ಜನರು ಗಲಭೆ ಸೃಷ್ಠಿಸುತ್ತಿದ್ದಾರೆ.
ನಾಡಿನ ಜನರ ಸೌಹಾರ್ದಕ್ಕಾಗಿ ದೇವರ ಎದುರುಲ್ಲಿ ಉರುಳು ಸೇವೆ ನಡೆಸಿದ್ದೇನೆ. ನ್ಯಾಯಾಧೀಶರು ನಾಡಿನ ಜನರ ಒಳಿತಿಗಾಗಿ ತೀರ್ಪು ನೀಡುವುದು ಕರ್ತವ್ಯವಾಘಿದೆ . ದೇಶದ ಶ್ರೇಯೋಭಿವೃದ್ಧಿಗಾಗಿ ದೇವರಲ್ಲಿ ಬೇಡಿದ್ದೇನೆ ಎಂದು ಜನಾರ್ದನ ಪೂಜಾರಿ ಹೇಳಿದರು.