ಮಂಗಳೂರು: ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಚಲಾಯಿಸುತ್ತಿದ್ದ ಬೈಕ್ಗೆ ಟಿಪ್ಪರ್ ಲಾರಿ ಗುದ್ದಿದ ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬುಧವಾರ ಮಂಗಳೂರಿನ ನಾಗುರಿಯಲ್ಲಿ ಸಂಭವಿಸಿದೆ.ಭಟ್ಕಳ ಮೂಲದ ಅಹಮ್ಮದ್ ರಿಯಾನ್ (20) ಮೃತ ವಿದ್ಯಾರ್ಥಿ.
ಸಹ್ಯಾದ್ರಿ ಎಂಜಿನಿಯರಿಂಗ್ ಹಾಗೂ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದ ರಿಯಾನ್ ಕಣ್ಣೂರಿನ ರೂಂ ಒಂದರಲ್ಲಿ ನೆಲೆಸಿದ್ದ. ಬುಧವಾರ ಸಂಜೆ ಆತ ತನ್ನ ಡ್ನೂಕ್ ಬೈಕ್ ಚಲಾಯಿಸಿಕೊಂಡು ಪಂಪ್ವೆಲ್ನಿಂದ ಕಣ್ಣೂರಿನತ್ತ ಹೊರಟಿದ್ದು, ಪಡೀಲ್ನಿಂದ ಪಂಪ್ವೆಲ್ನತ್ತ ಬರುತ್ತಿದ್ದ ಟಿಪ್ಪರ್ ಲಾರಿ ಢಿಕ್ಕಿ ಹೊಡೆದಿದೆ. ಟಿಪ್ಪರಿನ ಹಿಂದಿನ ಚಕ್ರ ಆತನ ಮೇಲೆ ಹರಿದಿದೆ. ಮಂಗಳೂರು ನಗರದ ಸಂಚಾರ ಪೂರ್ವ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.