ವಿಶ್ವ ತುಳುವೆರೆ ಆಯನೊದ ಉದ್ದೇಶ ಈಡೇರಿಸುವಲ್ಲಿ ಸರ್ವ ರೀತಿಯ ಸಹಕಾರ ನೀಡುವುದಾಗಿ ಮಾಜಿ ಕೇಂದ್ರ ಸಚಿವ,ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಭರವಸೆ ನೀಡಿದರು.ವಿಶ್ವ ತುಳುವೆರೆ ಆಯನೊದ ಸಮಿತಿ ಪದಾಧಿಕಾರಿಗಳು ಭೇಟಿಯಾದ ಸಂದರ್ಭದಲ್ಲಿ ಅವರನ್ನು ಉದ್ದೇಶಿಸಿ ಮಾತನಾಡಿದ ಮೊಯಿಲಿಯವರು ಈ ವಿಶ್ವ ತುಳುವೆರೆ ಆಯನೊ ಚರಿತ್ರೆ ಸೃಷ್ಠಿಸಿ ತುಳು ಭಾಷೆ ಎಂಟನೇ ಪರಿಚ್ಛೆದಕ್ಕೆ ಸೇರ್ಪಡೆಗೊಳಿಸುವಲ್ಲಿ ಸಹಕಾರವಾಗಲಿ ಎಂದರು.
ಈ ಸಂದರ್ಭದಲ್ಲಿ ಡಾ.ಬಿ.ಎ.ವಿವೇಕ ರೈ,ಡಾ.ಡಿ.ಕೆ.ಚೌಟ,ಮಹಾನಗರ ಪಾಲಿಕೆ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ತೇಜೋಮಯ,ಡಾ.ರಮಾನಂದ ಬನಾರಿ,ಎಂ.ಜೆ.ಕಿಣಿ,ಬಿ.ವಿ.ಕಕ್ಕಿಲ್ಲಾಯ,ಜೀವನ್ ರಾಮ್ ಸುಳ್ಯ,ಕೆ.ಆರ್.ಜಯಾನಂದ,ವಿಶ್ವ ತುಳುವೆರೆ ಆಯನೊದ ಪ್ರಧಾನ ಕಾರ್ಯದರ್ಶಿ ಡಾ.ರಾಜೇಶ್ ಆಳ್ವ ಬದಿಯಡ್ಕ, ದೈವರಾಧಕ ಸಮಿತಿ ಸಂಚಾಲಕ ಗೋಪಾಲಕೃಷ್ಣ ಕುಲಾಲ್,ಭಾಸ್ಕರ ಕುಂಬಳೆ ಮೊದಲಾದವರು ಉಪಸ್ಥಿತರಿದ್ದರು.