Friday 26th, April 2024
canara news

ಇಸ್ಮಾಯಿಲ್‌ ಕೊಲೆ ಪ್ರಕರಣ: 7 ಮಂದಿ ಆರೋಪಿಗಳ ಬಂಧನ

Published On : 04 Oct 2016   |  Reported By : Canaranews Network


ಮಂಗಳೂರು: ಕರಾವಳಿ ಕಾಂಗ್ರೆಸ್‌ ಅಲ್ಪ ಸಂಖ್ಯಾಕ ಘಟಕದ ಅಧ್ಯಕ್ಷ ಇಸ್ಮಾಯಿಲ್‌ ನೇಲ್ಯಮಜಲು (52) ಅವರನ್ನು ಸೆ. 23 ರಂದು ಸುಳ್ಯದ ಐವರ್ನಾಡು ಮಸೀದಿಯ ಬಳಿ ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕು ಅಮ್ಮುಂಜೆ ಗ್ರಾಮದ ಕಳಾಯಿ ಮನೆಯ ಅಬ್ದುಲ್‌ ರಶೀದ್‌ ಯಾನೆ ಮುನ್ನಾ (32), ಮಂಗಳೂರು ತಾಲೂಕು ಸುರತ್ಕಲ್‌ ಕೃಷ್ಣಾಪುರ 8 ನೇ ಕ್ರಾಸ್‌ನ ಆಬ್ಟಾಸ್‌ ಯಾನೆ ಇಬು° ಅಬ್ಟಾಸ್‌ (32), ಪುತ್ತೂರು ತಾಲೂಕು ಕೆದಿಲದ ಉಮ್ಮರ್‌ ಫಾರೂಕ್‌ ಎ.ಕೆ. (32), ಬೆಳ್ಳಾರೆಯ ರಹಿಮಾನ್‌ ಯಾನೆ ರಹೀಂ ಮತ್ತು ಫಾರೂಕ್‌, ಮಂಗಳೂರು ಬಿಜೈನ ಯಾಕೂಬ್‌, ಬಂಟ್ವಾಳ ತಾಲೂಕು ನಂದಾವರದ ಸೊಹೈಲ್‌ ಬಂಧಿತರು. ಆರೋಪಿಗಳಿಂದ ಕೃತ್ಯಕೆಕ ಉಪಯೋಗಿಸಿದ ರಿಟ್ಜ್ ಕಾರು ಮತ್ತು ಇತರ ಸೊತ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಆರೋಪಿಗಳನ್ನು ಬಂಧಿಸಿರುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಭೂಷಣ್‌ ಗುಲಾಬ್‌ರಾವ್‌ ಬೋರಸೆ ಅವರು ಸೋಮವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಅಡೀಶನಲ್‌ ಎಸ್‌ಪಿ ಡಾ | ವೇದಮೂರ್ತಿ, ಪುತ್ತೂರು ಎಎಸ್‌ಪಿ ರಿಷ್ಯಂತ್‌ ಮತ್ತು ಇತರ ಪೊಲೀಸ್‌ ಅಧಿಕಾರಿಗಳು ಉಪಸ್ಥಿತರಿದ್ದರು.

ಘಟನೆ ವಿವರ:
ಇಸ್ಮಾಯಿಲ್‌ ಅವರನ್ನು ಸೆ. 23 ರಂದು (ಶುಕ್ರವಾರ) ಮಧ್ಯಾಹ್ನ 1.45 ಕ್ಕೆ ಅವರು ಐವರ್ನಾಡು ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ತನ್ನ ಕಾರಿನ ಬಳಿ ಹೋಗುತ್ತಿದ್ದಾಗ ಹೊಂಚು ಹಾಕಿದ್ದ ತಂಡ ಮಾರಕಾಸ್ತ್ರಗಳಿಂದ ಯದ್ವಾ ತದ್ವಾ ಕಡಿದು ಕೊಲೆ ಮಾಡಿ ಪರಾರಿಯಾಗಿತ್ತು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here