ಮಂಗಳೂರು: ದ.ಕ. ಜಿಲ್ಲೆಯ ಬೃಹತ್ ಕಾರ್ಖಾನೆಗಳು ಅಪಾಯಕಾರಿ ತ್ಯಾಜ್ಯವನ್ನು ನೇರ ಸಮುದ್ರಕ್ಕೆ ಬಿಡುತ್ತಿದ್ದು, ಆ ತ್ಯಾಜ್ಯ ಮೀನಿನ ಆಹಾರದ ಜೊತೆ ಸೇರಿ ಮೀನು ಸೇವಿಸುವವರಿಗೆ ಅಪಾಯ ಉಂಟಾಗುತ್ತಿದೆ ಎಂದು ಯುಪಿಸಿಎಲ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ವಿಜಯಕುಮಾರ್ ಹೆಗ್ಡೆ ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಎಂಆರ್ಪಿಎಲ್, ಬಿಎಸ್ಎಫ್, ಎಸ್ಇಝೆಡ್ನ ಕಲ್ಲಿದ್ದಲು ಶೇಖರಣಾ ಘಟಕ ಹಾಗೂ ಪಡುಬಿದ್ರಿಯ ಯುಪಿಸಿಎಲ್ನಂತಹ ಬೃಹತ್ ಕಾರ್ಖಾನೆಗಳ ಅಪಾಯಕಾರಿ ತ್ಯಾಜ್ಯಗಳು ನೇರ ಸಮುದ್ರಕ್ಕೆ ಬಿಡಲಾಗುತ್ತಿವೆ. ಆ ತ್ಯಾಜ್ಯ ಮೀನಿನ ಆಹಾರದ ಜತೆ ಬೆರೆತು ಮೀನಿನ ದೇಹ ಸೇರುತ್ತಿದೆ. ಇದರಿಂದ ಮೀನು ಸೇವಿಸುವವರಿಗೆ ಸಮಸ್ಯೆಯಾಗುತ್ತಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಆರೋಪಿಸಿದರು.