ವಿಜಯ ಕಲಾವಿದರು ಕಿನ್ನಿಗೋಳಿ ತಂಡದಿಂದ `ಲೆಕ್ಕ ತತ್ತಿ ಬೊಕ್ಕ' ನಾಟಕ ಪ್ರದರ್ಶನ
ಮುಂಬಯಿ, ಅ.9: ತುಳು ಸಂಘ ಬರೋಡಾ ರೂಪಿಸಿರುವ ವಿಶ್ವದ ಪ್ರಪ್ರಥಮ ತುಳು ಚಾವಡಿ ಲೋಕಾರ್ಪಣೆ ಕಾರ್ಯಕ್ರಮವು ಇದೇ ಬರುವ ಅ.11ನೇ ಮಂಗಳವಾರ ವಿಜಯ ದಶಮಿ ಶುಭಾವಸರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ ಆಶೀರ್ವಚನದೊಂದಿಗೆ ಗುಜರಾತ್ ರಾಜ್ಯದ ಬರೋಡಾ ಅಲ್ಲಿನ ದಿನೇಶ್ ಮಿಲ್ ಸಮೀಪÀದಲ್ಲಿರುವ ಇಂಡಿಯಾ ಬುಲ್ಸ್ ಮೆಘಾ ಮಾಲ್ ಇಲ್ಲಿ ನೇರವೇರಿಸಲಾಗುವುದು ಎಂದು ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ (ಗುರುವಾಯನಕೆರೆ) ತಿಳಿಸಿದ್ದಾರೆ.
Pramod Madhwaraj Shrinivasa JoKatte
Dinesh Shetty Renjala Sunil V.Kumar
Bharat Janaki Brhamavar
S K Haleyangadi Karnire Vishwanath Shetty
K D Shetty Adv.Harish Poonja
Radhakrishna Shetty Dr. Veerendra Heggade
Manish Pagar Corporator Shashidar B.Shetty
ಸಮಾರಂಭದ ಪ್ರಧಾನ ಅಭ್ಯಾಗತÀರಾಗಿ ಕರ್ನಾಟಕ ರಾಜ್ಯ ಮೀನುಗಾರಿಕೆ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್, ಗೌರವ ಅತಿಥಿsಗಳಾಗಿ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್, ವಡೋದರ ಮೇಯರ್ ಭರತ್ ದಂಗೇರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಎಂ.ಜಾನಕಿ ಬ್ರಹ್ಮಾವರ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಅಧ್ಯಕ್ಷ ನ್ಯಾ| ಹರೀಶ್ ಪೂಂಜಾ, ಉದಯವಾಣಿ ಕನ್ನಡ ದೈನಿಕ ಮುಂಬಯಿ ಆವೃತ್ತಿಯ ಸಹ ಸಂಪಾದಕ ಡಾ| ದಿನೇಶ್ ಶೆಟ್ಟಿ ರೆಂಜಾಳ, ಬಂಟ್ಸ್ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಭವಾನಿ ಫೌಂಡೇಶನ್ನ ಸಂಸ್ಥಾಪಕ ದಡ್ದಂಗಡಿ ಚೆಲ್ಲಡ್ಕ ಕುಸುಮೋಧರ ದೇರಣ್ಣ ಶೆಟ್ಟಿ (ಕೆ.ಡಿ ಶೆಟ್ಟಿ) ಸೂರತ್ನ ಸಮಾಜ ಸೇವಕ ಮತ್ತು ಉದ್ಯಮಿ ರಾಧಾಕೃಷ್ಣ ಶೆಟ್ಟಿ, ವಡೋದರ ಮಹಾ ನಗರಪಾಲಿಕೆ ನಗರಸೇವಕ ಮನೀಷ್ ಪಗಾರ್ ಮೊದಲಾದವರು ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಎಸ್.ಕೆ ಹಳೆಯಂಗಡಿ ಅವರ `ಸುಖದ ಗುಟ್ಟು' ಕೃತಿಯನ್ನು ತುಳು ಸಂಘ ಬರೋಡ ಇದರ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ ಬಿಡುಗಡೆಗೊಳಿಸಲಿದ್ದಾರೆ. ಕರ್ನಾಟಕ ಮಲ್ಲ ಕನ್ನಡ ದೈನಿಕದ ಸಹ ಸಂಪಾದಕ ಶ್ರೀನಿವಾಸ ಜೋಕಟ್ಟೆ ಕೃತಿ ವಿಶ್ಲೇಷಣೆ ಮಾಡಲಿರುವರು.
ಈ ಸಂದರ್ಭದಲ್ಲಿ ವಾರ್ಷಿಕವಾಗಿ ನಡೆಸಿಕೊಂಡು ಬರುತ್ತಿರುವ ತುಳು ಸಂಪ್ರ್ರದಾಯಿಕ ಪುದ್ಧಾರ್ (ತೆನೆ ಹಬ್ಬ) ವನ್ನು ಅದ್ದೂರಿಯಿಂದ ಆಚರಿಸಲಾಯಿತು. ಸಂಘದ ಸದಸ್ಯರು ಮತ್ತು ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುವರು. ವಿಜಯ ಕಲಾವಿದರು ಕಿನ್ನಿಗೋಳಿ ತಂಡವು `ಲೆಕ್ಕ ತತ್ತಿ ಬೊಕ್ಕ' ತುಳು ನಾಟಕ ಪ್ರದರ್ಶಿಸಿಸುವರು.
ಗುಜರಾತ್ನಾದ್ಯಾಂತದಲ್ಲಿ ನೆಲೆಯಾಗಿರುವ ಸಮಸ್ತ ತುಳು-ಕನ್ನಡಿಗರು, ಸಂಘಸಂಸ್ಥೆಗಳ ಪದಾಧಿಕಾರಿ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಸಂಘದ ಗೌ| ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮತ್ತು ಕೋಶಾಧಿಕಾರಿ ವಾಸು ಪೂಜಾರಿ ಈ ಮೂಲಕ ವಿನಂತಿಸಿದ್ದಾರೆ.