ಮಂಗಳೂರು: ಕೇಂದ್ರ ಸರಕಾರದ ಭಾರತೀಯ ವ್ಯೂಹಾತ್ಮಕ ಪೆಟ್ರೋಲಿಯಂ ದಾಸ್ತಾನು ಸಂಸ್ಥೆ (ಐಎಸ್ಪಿಆರ್ಎಲ್) ಮಂಗಳೂರು ತಾಲೂಕು ಪೆರ್ಮುದೆ ಗ್ರಾಮದ ಚಂದ್ರಹಾಸ ನಗರದಲ್ಲಿ ಸ್ಥಾಪಿಸಿರುವ ಭೂಗತ ಕಚ್ಚಾ ತೈಲ ಸಂಗ್ರಹಣಾಗಾರದ ಕಾಮಗಾರಿ ಪೂರ್ಣಗೊಂಡಿದ್ದು, ಸಂಸದ ನಳಿನ್ ಕುಮಾರ್ ಕಟೀಲು ಬುಧವಾರ ತಣ್ಣೀರುಬಾವಿಯಲ್ಲಿರುವ ಎಂಆರ್ಪಿಎಲ್ನ ಎಸ್ಎಂಪಿ ಬೂಸ್ಟರ್ ಪಂಪ್ ಸ್ಟೇಷನ್ನಲ್ಲಿ ಸ್ವಿಚ್ ಆನ್ ಮಾಡಿ ಆಮದು ಕಚ್ಚಾ ತೈಲವನ್ನು ಕೊಳವೆಗೆ ಹರಿಸಿ ಇದರ ಕಾರ್ಯಾರಂಭ ಘೋಷಿಸಿದರು.
ದೇಶಕ್ಕೆ ತುರ್ತು ಸಂದರ್ಭಗಳಲ್ಲಿ ನೆರವಾಗಲು ಈ ಕಚ್ಚಾ ತೈಲ ದಾಸ್ತಾನು ವ್ಯವಸ್ಥೆ ಸ್ಥಾಪಿಸಲಾಗಿದೆ. ಇದೀಗ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಳ್ಳುವ ಮೂಲಕ ಕೇಂದ್ರ ಸರಕಾರದ ಕನಸು ನನಸಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.