ಮಂಗಳೂರು: ಮಂಗಳೂರು ನಗರ ಹಾಗೂ ದ.ಕ.ಜಿಲ್ಲಾ ವ್ಯಾಪ್ತಿಯಲ್ಲಿ ಹಟ್ಟಿಗೆ ನುಗ್ಗಿ ದನ ಕಳ್ಳತನ ಮಾಡುತ್ತಿದ್ದ ೬ ಮಂದಿ ಆರೋಪಿಗಳನ್ನು ಪೊಲೀಸರು ಪೊಳಲಿ ದ್ವಾರದ ಬಳಿ ಶನಿವಾರ ಬಂಧಿಸಿದ್ದಾರೆ. ಬಂಧಿತರನ್ನು ಬಜ್ಪೆ ಕರಂಬಾರು ನಿವಾಸಿ ನವಾಝ್ ಯಾನೆ ಅಬ್ದುಲ್ ನವಾಝ್, ಕೋಟೆಕಾರ್ ಕೆ.ಸಿ.ರೋಡ್ ನಿವಾಸಿ ಮಹಮ್ಮದ್ ಮನ್ಸೂರ್, ಪುದು ಗ್ರಾಮದ ಅಮ್ಮೆಮಾರ್ ಮನೆ ಮಾರಿಪಳ್ಳದ ಇಮ್ರಾನ್(೨೮), ಅದೇ ಗ್ರಾಮದ ಇಮ್ತಿಯಾಝ್ (೩೨), ಅಡ್ಯಾರ್
ಕೋಟೆಹೌಸ್ ನ ಬಾತಿಷ್(೩೦), ಕೋಟೆಕಾರ್ ಕೆ.ಸಿ.ರೋಡ್ ನ ಅಸ್ಗರ್ ಅಬ್ಬಾಸ್ (೩೦) ಎಂದು ಗುರುತಿಸಲಾಗಿದೆ. ನವೆಂಬರ್೧ರಂದು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಪ್ಪೆಪದವಿನ ಕೊಳವೂರು ಗ್ರಾಮದಲ್ಲಿ ೩ ದನಗಳನ್ನು ಕಳ್ಳತನ ಮಾಡಿದ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದೇ ದಿನ ಪ್ರಕರಣದ ರೂವಾರಿ ನವಾಜ್ ಕರಂಬಾರು ಎಂಬಾತನನ್ನು ಬಜಪೆ ಪೊಲೀಸ್ ಠಾಣಾ ಪಿ ಎಸ್ ಐ ರಾಜರಾಮ್ ಮತ್ತು ತಂಡ ಬಂಧಿಸಲು ಯತ್ನಿಸಿದಾಗ ಆರೋಪಿತರು ಪರಾರಿಯಾಗಿದ್ದಾರೆ. ಬಜ್ಪೆ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.