ಸಾಲುಮರದ ತಿಮ್ಮಕ್ಕ ಇಂಟರ್ನ್ಯಾಶನಲ್ ಫೌಂಡೇಶನ್ (ರಿ.) ವತಿಯಿಂದ ನೀಡಲಾದ 2016ನೇ ವರ್ಷದ ‘ಸಾಲುಮರದ ತಿಮ್ಮಕ್ಕ ನ್ಯಾಶನಲ್ ಗ್ರೀನರಿ ಅವಾರ್ಡ್’ನ್ನು ಉಡುಪಿಯ `ನಮ್ಮ ಮನೆ ನಮ್ಮ ಮರ’ ತಂಡದ ಅವಿನಾಶ್ ಕಾಮತ್, ಗುರುರಾಜ್ ಸನಿಲ್ ಹಾಗೂ ರವಿರಾಜ್ ಹೆಚ್. ಪಿ. ಇವರಿಗೆ ನೀಡಲಾಗಿದೆ.
ಬೆಂಗಳೂರಿನ ಡಾ| ಬಿ. ಆರ್. ಅಂಬೇಡ್ಕರ್ ಸಭಾ ಭವನದಲ್ಲಿ ಬಹಳ ಅದ್ಧೂರಿಯಾಗಿ ನಡೆದ ಈ ಸಮಾರಂಭದಲ್ಲಿ ರಾಜರ್ಷಿ ಡಾ| ವೀರೇಂದ್ರ ಹೆಗ್ಗಡೆಯವರು ಪ್ರಶಸ್ತಿ ಪ್ರದಾನ ನೆರವೇರಿಸಿದರು. ಸಮಾರಂಭದಲ್ಲಿ ಕರ್ನಾಟಕ ಸರಕಾರದ ಗೃಹಮಂತ್ರಿ ಡಾ| ಜಿ. ಪರಮೇಶ್ವರ್, ಸಾಲುಮರದ ತಿಮ್ಮಕ್ಕ ಮುಂತಾದ ಗಣ್ಯರು ಉಪಸ್ಥಿತರಿದ್ದರು.