ಮಂಗಳೂರು: ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ನಿಂತಿರುವ ಹಿಲರಿ ಕ್ಲಿಂಟನ್ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರು ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಕೋಶಾಧಿಕಾರಿ ಪದ್ಮರಾಜ್, ಕಾರ್ಪೊರೇಟರ್ ರಾಧಾಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ಅಮೆರಿಕ ದಲ್ಲಿ ಚುನಾವಣಾ ಪ್ರಚಾರ ನಡೆಯುತ್ತಿದೆ.
ಒಂದು ವರ್ಷದ ಮೊದಲು ಹಿಲರಿ ಕ್ಲಿಂಟನ್ ಶೇ. 12ರಷ್ಟು ಮುಂದೆ ಇದ್ದರು. ಆದರೆ, ಪ್ರಸ್ತುತ ಲೆಕ್ಕಾಂಶದ ಪ್ರಕಾರ ಹಿಲರಿ ಶೇ. 46 ಹಾಗೂ ಡೊನಾಲ್ಡ್ ಟ್ರಂಪ್ ಶೇ. 43ರಷ್ಟು ಬೆಂಬಲ ಹೊಂದಿದ್ದು, ಕೇವಲ ಶೇ. 3ರಷ್ಟು ಅಂತರವಿದೆ. ನ. 9ರಂದು ಏನು ನಡೆಯಬಹುದು ಎಂದು ಹೇಳಲು ಯಾರಿಗೂ ಸಾಧ್ಯವಿಲ್ಲ. ಒಂದು ವೇಳೆ ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಗೆದ್ದರೆ ಈ ಜಗತ್ತಿಗೆ ಅಪಾಯವಿದೆ. ಆತ ವಿಚಿತ್ರ ವ್ಯಕ್ತಿಯಾಗಿದ್ದು, ಯಾರ ಮಾತನ್ನೂ ಕೇಳುವ ಮನುಷ್ಯ ಅಲ್ಲ. ಆತ ಗೆದ್ದಲ್ಲಿ ಜಗತ್ತಿನಲ್ಲಿ ಹೈಡ್ರೋಜನ್ ಬಾಂಬ್ನ ಉಪಯೋಗವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.