ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಸದಾ ಕಿಡಿ ಕಾರುತ್ತಿದ್ದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರು ಶನಿವಾರ ಸ್ವಪಕ್ಷ ಕಾಂಗ್ರೆಸ್ ಸಮಾವೇಶಕ್ಕೆ 500 ರೂಪಾಯಿ 1000 ರೂಪಾಯಿ ಹಣ ಕೊಟ್ಟು ಜನರನ್ನು ಕರೆ ತರುವುದಿಲ್ಲವೆ ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಪೂಜಾರಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುವುದಿಲ್ಲ. 'ಮುಖ್ಯಮಂತ್ರಿಗಳೇ ಸಮಾವೇಶಕ್ಕೆ 1 ಲಕ್ಷ ಜನರನ್ನು ತರಲಿಕ್ಕೆ ಎಷ್ಟು ರೂಪಾಯಿ ನೋಟು ಕೋಡುತ್ತೀರಿ? 500 ರೂಪಾಯ ,1000 ರೂಪಾಯಿ ನೋಟು ಕೊಟ್ಟು ಕರೆ ತರುತ್ತೀರಿ. ಏನು 1 ರೂಪಾಯಿ ನೋಟು ಕೊಟ್ಟು ಕರೆ ತರುತ್ತೀರಾ' ಎಂದು ಕಿಡಿ ಕಾರಿದರು.
ರಾಜ್ಯದಲ್ಲಿ ಬರಗಾಲ ಇದೆ ಹೀಗಾಗಿ ಕಾಂಗ್ರೆಸ್ ಶಾಸಕರು,ಸಚಿವರೆಲ್ಲರು ಭತ್ಯೆ ತೆಗೆದುಕೊಳ್ಳಬೇಡಿ. ಮುಖ್ಯಮಂತ್ರಿ ಗಳು ಮಂಗಳೂರಿನಿಂದ ವಾಪಾಸಾಗುವ ಮುನ್ನ ಇದನ್ನು ಘೋಷಿಸಬೇಕು. ಇಲ್ಲವಾದರೆ ಪೂಜಾರಿ ಬಿಡುವವನಲ್ಲ. ತಾಕತಿದ್ದರೆ ಭತ್ಯೆ ತೆಗೆದುಕೊಳ್ಳಬೇಡಿ ಎಂದು ಸವಾಲು ಹಾಕಿದರು.