ಮಂಗಳೂರು: ‘ ಪಂಚತೀರ್ಥ -ಸಪ್ತಕ್ಷೇತ್ರ ಯಾತ್ರೆಗೆ ಕೈಗೊಂಡಿರುವ ಸಂಸದ ನಳೀನ್ ಕುಮಾರ್ ನೇತೃತ್ವದ ಎತ್ತಿನಹೊಳೆ ಯೋಜನೆ ವಿರೋಧಿ ಜನಾಂದೋಲಕ್ಕೆ ನಾಗರೀಕ ಸೇವಾ ಟ್ರಸ್ಟ್ ಮತ್ತು ಜನಸಂಘಟನೆಗಳಾದ ದ.ಕ. ಪರಿಸರಾಸಕ್ತರ ಒಕ್ಕೂಟ, ಕರಾವಳಿ ಮಹಿಳಾ ಜಾಗೃತಿ ವೇದಿಕೆ, ಕೃಷಿಕರ ವೇದಿಕೆ-ಕರ್ನಾಟಕ ಮತ್ತು ದಲಿತರ ಅಭಿವೃದ್ಧಿ ಸಮಿತಿ ವಿಷಯಾಧರಿತವಾಗಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಟ್ರಸ್ಟ್ ನ ಅಧ್ಯಕ್ಷ ಕೆ. ಸೋಮನಾಥ್ ನಾಯಕ್ ಹಾಗೂ ಸಹ ಸಂಘಟನೆಗಳ ಮುಖಂಡರುಗಳು ತಿಳಿಸಿದ್ದಾರೆ.