ಕುಂದಾಪುರ, ಡಿ.16: ಹಲವು ತಿಂಗಳ ಹಿಂದೆ ಬಿಡುಗಡೆಗೊಂಡ ಕೊಂಕಣಿ ಚಲನಚಿತ್ರ ನಶಿಬಾಚೊ ಖೇಳ್, ಮಂಗ್ಳೂರು, ಉಡುಪಿ, ಮುಂಬಯಿ ಮುಂತಾದಕಡೆ ಅಲ್ಲದೆ ಯು.ಎ.ಇ.ಯಲ್ಲಿ ಯಶ್ವಸ್ವಿ ಪ್ರದರ್ಶನಗೊಂಡು, ಈಗ 291ನೇ ಪ್ರದರ್ಶನದ ಅಂಗವಾಗಿ ಕುಂದಾಪುರದ ವಿನಯಾಕ ಟಾಕೀಸಿನಲ್ಲಿ ಈ ಪ್ರದರ್ಶನದ ಉದ್ಘಾಟನ ಕಾರ್ಯಕ್ರಮ ಜರಗಿತು.
ಈ ಉದ್ಘಾಟನೆಯನ್ನು ಕುಂದಾಪುರ ಹೋಲಿ ರೋಜರಿ ಚರ್ಚನ ಪ್ರಧಾನ ಧರ್ಮಗುರು ವ|ಅನಿಲ್ ಡಿಸೋಜಾರವರು ದೀಪ ಬೆಳಗಿಸಿ ಚಿತ್ರದ ಯಶಸ್ಸಿಗಾಗಿ ಹಾರೈಸುತ್ತಾ, ಅಪರೂಪವಾಗಿ ತೆರೆ ಕಾಣುತ್ತಿರುವ ಕೊಂಕಣಿ ಚಲನ ಚಿತ್ರಕ್ಕೆ ಜನರು ಪ್ರೋತ್ಸಾಹ ಅಗತ್ಯವಾಗಿದೆಯೆಂದು’ ಕರೆನೀಡಿದರು.
ನಿರ್ಮಾಪಕ ಹೆನ್ರಿ ಡಿಸಿಲ್ವಾ ಸುರತ್ಕಲ್ ‘ಚಿತ್ರ ನಿರ್ಮಾಣ ಮಾಡುವುದು ಕಶ್ಟವಲ್ಲಾ, ಚಿತ್ರ ಜನರಿಗೆ ತಲುಪಿಸುವಂತೆ ಮಾಡುವುದು ದೊಡ್ಡ ಕೆಲಸವಾಗಿದೆ, ಈ ಚಿತ್ರ ಪ್ರದರ್ಶನ ಕಂಡ ಎಲ್ಲಾ ಕಡೆ ಈ ಚಿತ್ರಕ್ಕೆ ಚೆನ್ನಾಗಿ ಪ್ರೋತ್ಸಾಹ ದೊರಕಿದೆ, ಇಲ್ಲಿಯೂ ಪ್ರೋತ್ಸಾಹ ದೊರುಕುವುದೆಂದು ಆಶಿಸುತ್ತೇನೆ, ಕುಂದಾಪುರದಲ್ಲಿ ಒಂದು ವಾರ ತನಕ ಚಿತ್ರ ಪ್ರದರ್ಶನಗೊಳ್ಳುವುದು, ಇನ್ನು ಒಂದು ವಾರ ಪ್ರದರ್ಶನ ಮುಂದುವರೆಯುವ ಆಲೋಚನೆಯೂ ಇದೆ’ ಎಂದು ಸುದ್ದಿಗಾರರಿಗೆ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ರಂಜಿತಾ ಲುವಿಸ್, ಸುಜಾತಾ ಅಂದ್ರಾದೆ, ಆಲ್ವಿನ್ ಅಂದ್ರಾದೆ, ರೊನ್ಸ್ ಲಂಡನ್ ಚಲನ ಚಿತ್ರದ ನಟ ನಟಿಯರು ಹಾಜರಿದ್ದರು. ಅತಿಥಿಗಳಾಗಿ ಕೋಟೆಶ್ವರ ಚರ್ಚಿನ ಧರ್ಮಗುರು ವಂ| ವಿನ್ಸೆಂಟ್ ಡಿಸೋಜಾ, ಪಯ್ಣಾರಿ ಡಾಟ್, ಕಾಮ್ನ ವಾಲೇರಿಯನ್ ಕ್ವಾಡರ್ಸ್, ಸಾಹಿತಿ ಬರ್ನಾಡ್ ಜೆ.ಕೋಸ್ತಾ, ಕಥೊಲಿಕ್ ಸಭಾದ ವಾಲೇರಿಯನ್ ಫೆರ್ನಾಂಡಿಸ್, ಶಾಂತಿ ಪೀರೆರಾ ಮುಂತಾದ ಗಣ್ಯರು ಹಾಜರಿದ್ದರು. ಫ್ಲಾಯ್ವನ್ ಡಿಸೋಜಾ ಸ್ವಾಗತಿಸಿ, ಕಾರ್ಯಕ್ರಮವನ್ನು ನೆಡೆಸಿಕೊಟ್ಟರು