ಮಂಗಳೂರು: ಬಂಟ್ವಾಳ ತಾಲೂಕಿನ ಪಾಂಡವಗುಡ್ಡೆ ಎಂಬಲ್ಲಿ ಯುವಕನೋರ್ವ ಪ್ರೀತಿಸಿದ ಯುವತಿಯನ್ನು ಚೂರಿಯಿಂದ ಇರಿದು ಕೊಲೆಗೈದು ತಾನೂ ಆತ್ಮಹತ್ಯೆಗೈದ ಘಟನೆ ನಡೆದಿದೆ.ಕೊಲೆಗೀಡಾದ ಯುವತಿಯನ್ನು ಬಂಟ್ವಾಳದ ಕುದನೆಗುಡ್ಡೆಯ ದಿವ್ಯಾ(೨೩) ಎಂದು ಗುರುತಿಸಲಾಗಿದೆ. ಯುವತಿಯನ್ನು ಕೊಲೆಗೈದು ಆತ್ಮಹತ್ಯೆಗೈದ ಕೊಯ್ಲದ ಕುಡಮಾಣಿ ನಿವಾಸೊ ಮೋಹನ್ ಪೂಜಾರಿಯವರ ಮಗ ಸುಜಿತ್(೨೮) ಎಂದು ಗುರುತಿಸಲಾಗಿದೆ.ಈ ಇಬ್ಬರೂ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಆದರೆ, ಯುವತಿಯು ಇತ್ತಿಚೆಗೆ ಪ್ರೀತಿಯನ್ನು ನಿರಾಕರಿಸಿ ಹುಡುಗನಿಂದ ದೂರವಾಗಿದ್ದಳು ಎಂದು ಹೇಳಲಾಗುತ್ತಿದೆ, ಇದರಿಂದ ಕ್ರೋಧಗೊಂಡ ಯುವಕ ಯುವತಿಯನ್ನು ಪಾಂಡವಗುಡ್ಡೆಗೆ ಕರೆದುಕೊಂಡು ಹೋಗಿ ಚೂರಿಯಿಂದ ಇರಿದು ಕೊಲೆಗೈದಿದ್ದಾನೆ ಎನ್ನಲಾಗಿದೆ. ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.