ಯೋಗೆಶ್ ಕೆ.ಹೆಜ್ಮಾಡಿ ದಂಪತಿ ಮತ್ತು ಸೇವಾದಳಕ್ಕೆ ಗೌರವಾರ್ಪಣೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಫೆ.06: ಕಳೆದ ಭಾನುವಾರ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಸಭಾಗೃಹದಲ್ಲಿ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಖಾರ್ ಪೂರ್ವ ಸಂಚಾಲಕತ್ವದ ಶ್ರೀ ಶನಿಮಹಾತ್ಮ ಮಂದಿರದ ಸುವರ್ಣ ಮಹೋತ್ಸವ ಸಂಭ್ರಮ ಸಮಾರಂಭ ವಿಜೃಂಭನೆಯಿಂದ ಜರುಗಿಸಲ್ಪಟ್ಟಿತು. ಸಮಾರಂಭದಲ್ಲಿ ಸಮಿತಿ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ನಿರಂತರ 50 ವರ್ಷಗಳ ಸೇವೆಸಲ್ಲಿಸಿದ ಯೋಗೆಶ್ ಕೆ.ಹೆಜ್ಮಾಡಿ ಮತ್ತು ಲೀಲಾ ಯೋಗೆಶ್ ದಂಪತಿಯನ್ನು ಅತಿಥಿüಗಳು ಸೇವಾ ಸಮಿತಿ ಪರವಾಗಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.
ಅಂತೆಯೇ ಬಿಲ್ಲವರ ಅಸೋಸಿಯೇಶನ್ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಉಪಸ್ಥಿತಿಯಲ್ಲಿ ಅಸೋಸಿಯೇಶ ನ್ನ ಸೇವಾದಳದ ಅನನ್ಯ ಸೇವೆಯನ್ನು ಪರಿಗಣಿಸಿ ಗೌರವಿಸಲಾಯಿತು. ಸೇವಾದಳ ಪಡೆಯ ಸಿಪಾಯಿಗಳು, ಮಹಿಳಾ ಕಾರ್ಯಕರ್ತೆಯರನ್ನು ಸೇರಿಕೊಂಡು ಸೇವಾದಳದ ದಳಪತಿ ಗಣೇಶ್ ಕೆ.ಪೂಜಾರಿ, ಉಪ ದಳನಾಯಕ ಸುಧಾಕರ ಎ.ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಶನಿ ಮಹಾತ್ಮ ಸೇವಾ ಸಮಿತಿಯ ಅಧ್ಯಕ್ಷ ಶಂಕರ್ ಕೆ.ಸುವರ್ಣ, ಗೌರವಾಧ್ಯಕ್ಷ ಶ್ರೀಧರ್ ಜೆ. ಬಂಗೇರ, ಉಪಾಧ್ಯಕ್ಷ ದೇವೇಂದ್ರ ವಿ.ಬಂಗೇರ, ಗೌ| ಪ್ರ| ಕೋಶಾಧಿಕಾರಿ ನಾಗೇಶ್ ಜಿ.ಸುವರ್ಣ, ಮಹಿಳಾ ಮಂಡಳಿ ಮುಖ್ಯಸ್ಥೆ ಕೇಸರಿ ಬಿ.ಅಮೀನ್, ಪ್ರಕಾಶ್ ಮೂಡಬಿದ್ರಿ ಮತ್ತಿತರ ಪದಾಧಿಕಾರಿಗಳು, ಸದಸ್ಯರು, ಅಸೋಸಿಯೇಶನ್ನ ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ. ಕಾರ್ಕಳ, ದಾಮೋದರ ಸಿ.ಕುಂದರ್, ನ್ಯಾ| ಎಸ್.ಬಿ ಅವಿೂನ್, ಭಾರತಿ ನಿಟ್ಟೇಕರ್, ಹರಿದಾಸ ಜಿ.ಶೆಟ್ಟಿ ವಿದ್ಯಾವಿಹರ್, ನಿಲೇಶ್ ಪೂಜಾರಿ ಪಲಿಮಾರ್, ಹರೀಶ್ ಅಂಚನ್ ಮತ್ತಿತರÀರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.