ಮುಂಬಯಿ, ಫೆ.06: ಮಂಗಳೂರು ತಾಲೂಕಿನ ಮೂಲ್ಕಿ-ಹಳೆಯಂಗಡಿ ಇಲ್ಲಿನ ಹರಿಪಾದೆ ಪಂಜ ಕೊೈಕುಡೆ ದೈವಾರಾಧನೆಯ ಶ್ರೀ ಹರಿಪಾದೆ ಧರ್ಮದೈವ ಜಾರಂತಾಯ ದೈವಸ್ಥಾನ ಪಂಜ ಕೈಕುಡೆ ಇದರ ವರ್ಷಾವಧಿ ನೇಮೋತ್ಸವ ಇದೇ ಬರುವ ಶುಕ್ರವಾರ (ಫೆ.10) ಸಂಜೆಯಿಂದ ನಡೆಯಲಿದೆ.
ಆ ನಿಮಿತ್ತ ಅಂದು ಶುಕ್ರವಾರ ಸಂಜೆ 7.00 ಗಂಟೆಗೆ ಭಂಡಾರ ಮನೆಯಿಂದ ಶ್ರೀ ದೈವ ಜಾರಂತಾಯನ ಭಂಡಾರ ಹೊರಡಲಿದೆ. ತದನಂತರ ಚೌತಿ ಹಬ್ಬ, ದೀಪಹಬ್ಬ, ರಾತ್ರಿ ಕೊಡಿ ಏರಿಸುವ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.
ಮರುದಿನ ಶನಿವಾರ (ಫೆ.11) ರಾತ್ರಿ 10.30 ಗಂಟೆಗೆ ಶ್ರೀ ಕೃಷ್ಣಾಪುರ ಮಠಾಧೀಶ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಅವರ ಆಶೀರ್ವಾದಗಳೊಂದಿಗೆ ವರ್ಷಾವಧಿ ನೇಮೋತ್ಸವ ಜರುಗಲಿದೆ. ಆ ಪ್ರಯುಕ್ತ ಪೂರ್ವಸಿದ್ಧತೆಯಾಗಿ ತುಡಾರ ಬಲಿ, ಧ್ವಜಾರೋಹಣ, ಕೋಳಿಗುಂಟ ಕಾರ್ಯಕ್ರಮ ನಡೆದಿದ್ದು, ಫೆ.11ನೇ ಶನಿವಾರ ಬೆಳಿಗ್ಗೆ 10.00 ಗಂಟೆಗೆÀ ಜಾರಂತಾಯ ಯುವಕರ ಕೂಡುವಿಕೆ ಯಲ್ಲಿ ಭಜನೆ, ಪೂರ್ವಾಹ್ನ 11.00 ಗಂಟೆಗೆÀ ತುಲಾಭಾರ ಸೇವೆ ಮಧ್ಯಾಹ್ನ ಅನ್ನಸಂತಾರ್ಪಣೆ, ಸಂಜೆ 7.00 ಗಂಟೆಗೆÀ ಶಿಬರೂರು ಸುರೇಶ್ ಶೆಟ್ಟಿ ಬಳಗದಿಂದ ಭಕ್ತಿಸಂಗೀತ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 10.00 ಗಂಟೆಗೆÀ ವಾರ್ಷಿಕೋತ್ಸವ, ಸಭಾಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಪಂಜ ಮತ್ತು ಪ್ರಾಥಮಿಕ ಶಾಲೆ ಕೊೈಕುಡೆ ಇದರ ಏಳನೇ ಶಾಲಾ ವಿದ್ಯಾಥಿರ್üಗಳಿಗೆ ಹಾಗೂ ಕೆಮ್ರಾಲ್ ಸರಕಾರಿ ಫ್ರೌಡ ಶಾಲಾ ಹತ್ತನೇ ತರಗತಿಯ ವಿದ್ಯಾಥಿರ್üಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಅಭಿನಂದಿಸಲಾಗುವುದು.
ಈ ವರ್ಷಾವಧಿ ನೇಮೋತ್ಸವದಲ್ಲಿ ಊರ ಮತ್ತು ಪರವೂರ ಭಕ್ತ ಮಹಾಶಯರು ಆಗಮಿಸಿ ಸಿರಿಮುಡಿ ಗಂಧಪ್ರಸಾದ ಸ್ವೀಕರಿಸಿ ಶ್ರೀ ಜಾರಂತಾಯ ದೈವದ ಕೃಪೆಗೆ ಪಾತ್ರರಾಗಬೇಕೆಂದು ಎಂದು ಶ್ರೀ ಹರಿಪಾದೆ ಧರ್ಮದೈವ ಜಾರಂಧಾಯ ದೇವಸ್ಥಾನದ ಮುಂಬಯಿ ಸಮಿತಿಯ ಭುಜಂಗ ಎಂ.ಶೆಟ್ಟಿ ಹಾಗೂ ಪಂಜ ನಲ್ಯಗುತ್ತು ಪ್ರಕಾಶ್ ಟಿ.ಶೆಟ್ಟಿ ಮುಂಬಯಿ (9819035241) ಈ ಮೂಲಕ ವಿನಂತಿಸಿದ್ದಾರೆ.