ಮುಂಬಯಿ, ಫೆ.23: ಮುಂಬಯಿ ಉಪನಗರದ ಸ್ಥಳೀಯಾಡಿತ ಥಾಣೆ ಮಹಾನಗರ ಪಾಲಿಕೆ (ಟಿಎಂಸಿ) ಗೆ ಕಳೆದ ಮಂಗಳವಾರ ನಡೆದ ಚುನಾವಣೆಯಲ್ಲಿ ಮಾನ್ಪಾಡ ಮನೋರಮ ನಗರದ 3ಸಿ ವಾರ್ಡ್ನಿಂದ ಶಿವಸೇನಾ ಪಕ್ಷದ ಅಭ್ಯಥಿ೯ಯಾಗಿ ಸ್ಪರ್ಧಿಸಿದ್ದ ದಿ| ಗುರುವ ಕಾಂತಪ್ಪ ಪೂಜಾರಿ ಸುಪುತ್ರಿ ವಿೂನಾಕ್ಷಿ ರಾಜೇಂದ್ರ ಶಿಂಧೆ (ಹಾಲಿ ನಗರ ಸೇವಕಿ) ಪೂಜಾರಿ ಭಾರೀ ಅಂತರದ ಮತಗಳಿಂದ ಜಯಭೇರಿ ಪಡೆದು ಹ್ಯಾಟ್ರಿಕ್ ಸಾಧಿಸಿದ್ದಾರೆ.
ವಿೂನಾಕ್ಷಿ ಪೂಜಾರಿ ಅವರು ಮೂಲತಃ ಉಡುಪಿ ಜಿಲ್ಲೆಯ ಕಟಪಾಡಿ ಎಣಗುಡ್ಡೆ ನಿವಾಸಿ ಆಗಿದ್ದಾರೆ. ಇವರು ಬಿಜೆಪಿ ಸ್ಪರ್ಧಿ ದೀಪ್ಮಾಲ ಮಾಡ್ವಿ ಅವರಕ್ಕಿಂತ ಸುಮಾರು 2,800 ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ. ಮಾತ್ರವಲ್ಲದೆ ನಿರಂತರ ಮೂರನೇ ಬಾರಿ ಸ್ಪರ್ಧಿಸಿ ವಿಜೇತರೆಣಿಸಿದ ತುಳುಕನ್ನಡತಿ. ಈ ವಾರ್ಡ್ನಿಂದ ಎಂ.ಎನ್ ಎಸ್ ಸೇರಿದಂತೆ ಕೇವಲ ಮೂರು ಪಕ್ಷಗಳ ಅಭ್ಯಥಿರ್üಗಳಷ್ಟೇ ಸ್ಪರ್ಧಿಸಿದ್ದು ಇವುಗಳ ಮಧ್ಯೆಯೇ ತ್ರಿಕೋಣ ಸ್ಪರ್ಧೆ ಏರ್ಪಾಡಿತ್ತು.