ಮಂಗಳೂರು : ತಾಯಿ ಜೊತೆ ಅಜ್ಜಿ ಮನೆಗೆ ಬಂದ ಮಗುವೊಂದು ಕಾರಿನಲ್ಲೇ ಬಾಕಿಯಾಗಿ ಉಸಿರುಗಟ್ಟಿ ಸಾವನ್ನಪ್ಪಿದ ದುರ್ಘಟನೆ ದ.ಕ.ಜಿಲ್ಲೆಯ ಪುತ್ತೂರಿನ ಹೊರವಲಯದ ಹಾರಾಡಿಯಲ್ಲಿ ನಡೆದಿದೆ. ಉಳ್ಳಾಲದ ಇಮ್ರಾನ್ ಎಂಬವರ ಪುತ್ರಿ ರಹಮತ್ (3) ಮೃತಪಟ್ಟ ಮಗು. ಇಮ್ರಾನ್ ವಿದೇಶದಲ್ಲಿದ್ದು ಪುತ್ತೂರಿನ ಹಾರಾಡಿಯ ಸಂಶೀರ ಎಂಬವರನ್ನು ಮದುವೆಯಾಗಿದ್ದರು. ಎರಡನೇ ಹೆರಿಗೆಯಾಗಿ 20 ದಿನಗಳು ಕಳೆದಿದ್ದು ಬುಧವಾರ ಸಂಜೆ ತಾಯಿ ಮನೆಗೆ ಬಂದಿದ್ದರು.
ಹಾರಾಡಿಗೆ ಬಂದ ಇಮ್ರಾನ್ ಕುಟುಂಬಸ್ಥರು ಎಲ್ಲರೂ ಕಾರಿನಿಂದ ಇಳಿದಿದ್ದರು. ಆದರೆ ಮಗುವನ್ನು ಕಾರಿನಲ್ಲೇ ಬಿಟ್ಟಿದ್ದರು.ಸ್ವಲ್ಪ ಹೊತ್ತಿನ ಬಳಿಕ ಮಗಳು ಕಾಣತ್ತಿಲ್ಲ ಎಂದು ತಾಯಿ ಹುಡುಕಾಡಿದ್ದಾರೆ. ಆ ವೇಳೆ ಕಾರಿನಲ್ಲಿ ಮಗು ಕೂತ ಸ್ಥಿತಿಯಲ್ಲೇ ಮಲಗಿತ್ತು. ಎಬ್ಬಿಸುವ ವೇಳೆ ಮಗು ಮಾತನಾಡುತ್ತಿರಲಿಲ್ಲ. ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆ ವೇಳೆ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ