ಬೆಂಗಳೂರಿನಲ್ಲಿರುವ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಬಡ ಹಾಗೂ ಅರ್ಹ ಹೃದ್ರೋಗಿಗಳಿಗೆ ಚಿಕಿತ್ಸೆಗಾಗಿ ಧರ್ಮಸ್ಥಳಧ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಕಳೆದ ಆರ್ಥಿಕ ವರ್ಷದಲ್ಲಿ ಇಪ್ಪತ್ತು ಲಕ್ಷ ರೂಪಾಯಿ ನೆರವು ನೀಡಿದ್ದಾರೆ.
ಧರ್ಮಸ್ಥಳದ ಆರ್ಥಿಕ ನೆರವಿನಿಂದ ಕಳೆದ ವರ್ಷ 124 ಬಡ ಹೃದ್ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ನೀಡಿದ್ದು, ಅವರೆಲ್ಲ ಪೂರ್ಣ ಆರೋಗ್ಯ ಹೊಂದಿ ಸಂತೋಷದ ಜೀವನ ನಡೆಸುತ್ತಿದ್ದಾರೆ ಎಂದು ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಖ್ಯಾತ ಹೃದಯ ರೋಗ ತಜ್ಞರೂ ಆಗಿರುವ ಡಾ. ಸಿ. ಎನ್. ಮಂಜುನಾಥ್ ತಿಳಿಸಿ ಹೆಗ್ಗಡೆಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇಂಡೋನೇಶಿಯಾ, ಪಶ್ಚಿಮ ಬಂಗಾಲ ಹಾಗೂ ದೇಶದ ವಿವಿಧ ರಾಜ್ಯಗಳ ರೋಗಿಗಳೂ ಈ ನೆರವಿನ ಪ್ರಯೋಜನ ಪಡೆದಿದ್ದಾರೆ.
ಅರ್ಹ ರೋಗಿಗಳಿಗೆ ಮುಂದಿನ ವರ್ಷದಲ್ಲಿ ಚಿಕಿತ್ಸೆಗಾಗಿ 20 ಲಕ್ಷ ರೂ. ನೆರವನ್ನು ನೀಡಲಾಗುವುದು.
2009ರಿಂದ ನಿರಂತರವಾಗಿ ಅರ್ಹ ಹೃದ್ರೋಗಿಗಳ ಚಿಕಿತ್ಸೆಗಾಗಿ ಧರ್ಮಸ್ಥಳದಿಂದ ರೂ. 20 ಲಕ್ಷ ನೆರವು ನೀಡಲಾಗುತ್ತಿದೆ.