ಮುಂಬಯಿ, ಮೇ.21: ಕರ್ನಾಟಕ ಸಂಘ ಮುಂಬಯಿ ಇದರ ಸಕ್ರಿಯ ಸದಸ್ಯರೂ, ಕಾನೂನು ತಜ್ಞ ಹಾಗೂ ಸಾಹಿತಿ ವಾಸುದೇವ ಕಾಣೆಮಾರ್ ರಚಿತ `ಶ್ರೀಕೃಷ್ಣ ಗೀತಾ' (ಮೂಲ ಶ್ಲೋಕಗಳ ಭಾಷಾಂತರ ಮತ್ತು ಅನುವಾದ) ಕೃತಿಯನ್ನು ಇಂದಿಲ್ಲಿ ಭಾನುವಾರ ಮಧ್ಯಾಹ್ನ ಮಂಗಳೂರು ಕಾರ್ಸ್ಟ್ರೀಟ್ ಅಲ್ಲಿನ ಕಾಣೆಮಾರ್ ಸ್ವಗೃಹದಲ್ಲಿ ಬಿಡುಗಡೆ ಗೊಳಿಸಲ್ಪಟ್ಟಿತು.
ಕೆನಡಾದಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಪದವೀಧರನಾಗಿ ಪಿಹೆಚ್ಡಿ ಪಡೆದ ಡಾ| ವಿ.ವಿಠಲ್ ರಾವ್ ಹಾಗೂ ಪೆÇ್ರ| ಜ್ಯೋತಿ ರಾವ್ ದಂಪತಿ ಪುಸ್ತಕ ಬಿಡುಗಡೆ ಗೊಳಿಸಿ ಶುಭಾರೈಸಿದರು.
ಈ ಸಂದರ್ಭದಲ್ಲಿ ನಾಡಿನ ಹೆಸರಾಂತ ಕ್ಯಾನ್ಸರ್ ತಜ್ಞ ಡಾ| ಕೃಷ್ಣಪ್ರಸಾದ್, ಇಎನ್ಟಿ ಸ್ಪೆಷಲಿಸ್ಟ್ ರಾಘವೇಂದ್ರ ಅರೂರ್, ಮಾನಸಿಕ ತಜ್ಞೆ ಡಾ| ಸುಪ್ರಿಯ ಹೆಗ್ಡೆ, ಜನರಲ್ ಫಿಸಿಷಿಯನ್ ಡಾ| ಎಸ್. ಆಚಾರ್, ನರರೋಗ ತಜ್ಞ ಡಾ| ದಿವಾಕರ್ ರಾವ್, ಸರ್ಜನ್ ಡಾ| ದಿನೇಶ್ ರಾವ್, ಜಾನಕಿ ಕಾಣೆಮಾರ್ ಮತ್ತಿತರರು ಉಪಸ್ಥಿತರಿದ್ದರು.
ಗಣೇಶ್ ರಾವ್ ಸ್ವಾಗತಿಸಿ ಪ್ರಸ್ತಾವನೆಗೈದರು. ಶೋಭಾ ಜಿ.ರಾವ್ ಕಾರ್ಯಕ್ರಮ ನಿರ್ವಹಿಸಿದರು. ಸಂತೋಷ್ ಕಾಣೆಮಾರ್ ವಂದಿಸಿದರು.