ಮುಂಬಯಿ, ಜೂ.26: ಚೆಂಬೂರು ತಿಲಕ್ ನಗರದ ನಿವಾಸಿ ಕು| ಅಧಿತಿ ಸತೀಶ್ ಸಾಲ್ಯಾನ್ ನೇಪಾಳದ ಕಾಠ್ಮುಂಡುವಿನಲ್ಲಿ ನೇರವೇರಿದ ಅಂತರಾಷ್ಟ್ರೀಯ ಆಟದ ಟೆನ್ನಿಸ್ ವಾಲಿಬಾಲ್ ಪಂದ್ಯಾಟದಲ್ಲಿ ಸೆಣಸಾಡಿ ಭಾರತಕ್ಕೆ ಚಿನ್ನದ ಪದಕ ತಂದೊದಗಿಸಿದ ತುಳು-ಕನ್ನಡತಿ.
ಮೂಲತಃ ಉಡುಪಿ ಜಿಲ್ಲೆಯ ಹೆಜಮಾಡಿ ಮೂಲದ ಬಿಲ್ಲವರ ಸಮುದಾಯ ಸತೀಶ್ ಕೆ.ಸಾಲ್ಯಾನ್ ಮತ್ತು ಸುರೇಖ ಸಾಲ್ಯಾನ್ ದಂಪತಿ ಸುಪುತ್ರಿ ಅಧಿತಿ ಸತತ ಮೂರು ಬಾರಿ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಮುಂಬಯಿಗೆ 2ನೇ ಸ್ಥಾನ ಗಿಟ್ಟಿಸಿ ಕೊಂಡಿದ್ದಾರೆ. ಅಧಿತಿ ಅವರು ಮುಂಬಯಿಯಲ್ಲಿ ವಾಣಿಜ್ಯ ವಿಭಾಗದ ಪ್ರಥಮ ವಿಭಾಗದ ವಿದ್ಯಾಥಿರ್üನಿ ಆಗಿದ್ದು ತನ್ನ ಸತತ ಪ್ರಯತ್ನದಿಂದ ಮತ್ತು ಅಪಾರ ಸಾಧನೆಯಿಂದ ಭಾರತಕ್ಕೆ ಚಿನ್ನದ ಪದಕ ತರುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತ ತಂದವು ನೇಪಾಳ, ಭೂತನ್, ಪಾಕಿಸ್ಥಾನ ಮತ್ತು ಭಾಂಗ್ಲಾದೇಶಗಳÀನ್ನು ಸೋಲಿಸಿ ಅಂತಿಮ ಸ್ಪರ್ಧೆಗೆ ತಲುಪಿ ಟೆನ್ನಿಸ್ ವಾಲಿಬಾಲ್ ಮೂಲಕ ಭಾರತಕ್ಕೆ ಚಿನ್ನದ ಪದಕ ತಂದೊದಗಿಸಿದೆ. ಇದು ನಮ್ಮ ತುಳು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.