ಮಂಗಳೂರು: ಕರಾವಳಿ ಭಾಗದ ಜನಪದ ಕ್ರೀಡೆ ಕಂಬಳ ಆಯೋಜನೆ ಸಂಬಂಧ ರಾಜ್ಯ ಸರಕಾರ ಹೊರಡಿಸಿದ್ದ ಅಧ್ಯಾದೇಶಕ್ಕೆ ಸೋಮವಾರ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ.
ಇದರೊಂದಿಗೆ ಕಂಬಳ ಆಯೋಜನೆಗೆ ಎದುರಾಗಿದ್ದ ತೊಡಕಿಗೆ ತಾತ್ಕಾಲಿಕ ಪರಿಹಾರ ಸಿಕ್ಕಿದ್ದು, ಮುಂದಿನ 6 ತಿಂಗಳ ಅವಧಿಯಲ್ಲಿ ಕಂಬಳ ನಡೆಸಲು ಅಧಿಕೃತ ಅನುಮತಿ ಲಭಿಸಿದೆ. ರಾಜ್ಯದಲ್ಲಿ ತುರ್ತಾಗಿ ಕಂಬಳ ಆಯೋಜಿಸಲು ಕಾನೂನಿನಡಿ ಅನುಮತಿ ನೀಡುವ ಉದ್ದೇಶದಿಂದ ಸರಕಾರವು ತುರ್ತಾಗಿ ಅಧ್ಯಾದೇಶ ಮಾಡಿ ರಾಜ್ಯ ಪಾಲರ ಮೂಲಕ ಕೇಂದ್ರಸರಕಾರಕ್ಕೆ ಕಳುಹಿಸಿತ್ತು. ಈ ಅಧ್ಯಾದೇಶಕ್ಕೆ ರಾಷ್ಟ್ರಪತಿಗಳ ಅನುಮತಿಯೊಂದಿಗೆ ಗೃಹ ಸಚಿವಾಲಯ ಆದೇಶವನ್ನು ಹೊರಡಿಸಿ ಅದನ್ನು ಕರ್ನಾಟಕ ಸರಕಾರದ ಸಂಸದೀಯ ಕಾರ್ಯದರ್ಶಿಗೆ ರವಾನಿಸಿದೆ.