ಮುಂಬಯಿ, ಜು.13: ಕನ್ನಡ ಸಂಘ ಮುಂಬಯಿ ವಾರ್ಷಿಕವಾಗಿ ಆಯೋಜಿಸುತ್ತಿರುವ ಕನ್ನಡ ಸರ್ಟಿಫಿಕೇಟ್ ಕೋರ್ಸ್ನ ಉದ್ಘಾಟನೆ ಮತ್ತು ಪ್ರಮಾಣಪತ್ರ ವಿತರಣಾ ಕಾರ್ಯಕ್ರಮವು ಇದೇ ಜು.16ನೇ ಭಾನುವಾರ ಪೂರ್ವಾಹ್ನ 10.00 ಗಂಟೆಗೆ ಮಾಟುಂಗ (ಸೆಂಟ್ರಲ್ ರೈಲ್ವೇ) ಭಾವುದಾಜಿ ರಸ್ತೆಯ ವೆಂಕಟೇಶ್ ನಿವಾಸದ ಸಂಘದ ಕಛೇರಿಯಲ್ಲಿ ಜರಗಲಿದೆ ಎಂದು ಸಂಘದ ಉಪಾಧ್ಯಕ್ಷ ಡಾ| ಎಸ್.ಕೆ ಭವಾನಿ ತಿಳಿಸಿದ್ದಾರೆ.
S K Sunder G.N Nayak
S K Bhavani Satish N.Bangera
ಸಂಘದ ಅಧ್ಯಕ್ಷ ಗುರುರಾಜ್ ಎಸ್.ನಾಯಕ್ ಅಧ್ಯಕ್ಷತೆಯಲ್ಲಿ ಜರಗುವ ಕಾರ್ಯಕ್ರಮಕ್ಕೆ ಸಾಹಿತ್ಯ ಬಳಗ ಮುಂಬಯಿ ಇದರ ಗೌರವ ಕಾರ್ಯದರ್ಶಿ ಎಸ್.ಕೆ ಸುಂದರ್ ಅವರು 2017-18ನೇ ಸಾಲಿನ ಕನ್ನಡ ಸರ್ಟಿಫಿಕೇಟ್ ಕೋರ್ಸ್ನ ಚಾಲನೆ ನೀಡಲಿದ್ದಾರೆ ಎಂದು ಸಂಘದ ಗೌರವ ಖಜಾಂಚಿ ಸುಧಾಕರ್ ಸಿ.ಪೂಜಾರಿ ತಿಳಿಸಿದ್ದಾರೆ.
ಸಂಘದ ಗೌ| ಜೊತೆ ಕಾರ್ಯದರ್ಶಿ ಸೋಮನಾಥ್ ಕರ್ಕೇರ ಮಹಿಳಾ ವಿಭಾಗಧ್ಯಕ್ಷೆ ರಜನಿ ವಿ.ಪೈ, ವಾಚನಾಲಯದ ಮುಖ್ಯಸ್ಥ ಎಸ್.ಕೆ ಪದ್ಮನಾಭ, ಕನ್ನಡ ತರಬೇತಿ ಶಿಕ್ಷಕಿ ಆರ್ಚನಾ ಆರ್.ಪೂಜಾರಿ ಉಪಸ್ಥಿತಿಯಲ್ಲಿ ಜರಗುವ ಅವಳಿ ಕಾರ್ಯಕ್ರಮದಲ್ಲಿ ಮಹಾನಗರದಲ್ಲಿ ಹೆಚ್ಚಿನ ಕನ್ನಡಾಭಿಮಾನಿಗಳು, ಭಾಶಾಸಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಗೌರವ ಪ್ರಧಾನ ಕಾರ್ಯದರ್ಶಿ ಸತೀಶ್ ಎನ್. ಬಂಗೇರ ಈ ಮೂಲಕ ವಿನಂತಿಸಿದ್ದಾರೆ.