ಸ್ವಾಸ್ಥ್ಯ ಸಂಕಲ್ಪಕ್ಕೆ ಪಾಲಕರ ಮತ್ತು ಶಿಕ್ಷಕ ಪಾತ್ರ ಹಿರಿದು : ಲಕ್ಷಿ ್ಮೀ ಮಚ್ಚಿನ
ಮುಂಬಯಿ (ಬೆಳ್ತಂಗಡಿ), ಜು.31: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ಮತ್ತು ತಾಲೂಕು ಜನಜಾಗ್ರತಿ ವೇದಿಕೆ ಆಶ್ರಯದಲ್ಲಿ, ಧರ್ಮಸ್ಥಳ ಶ್ರೀ ಧರ್ಮಸ್ಥಳ ಮಂಜುನಾಥ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತ ಪತ್ರಕರ್ತ, ಲಕ್ಷ್ಮೀ ಮಚ್ಚಿನ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಮಚ್ಚಿನ ಅವರು ವಿದ್ಯಾಥಿರ್üಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ವಿದ್ಯಾಥಿರ್üಗಳು ವಿನಯದ ಮೂಲಕ, ಅನುಭವದ ಮೂಲಕ, ಇತರರು ಹೇಳಿದ್ದನ್ನು ಕೇಳುವುದರ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಿದೆ. ಸ್ವಾಸ್ಥ್ಯ ಸಂಕಲ್ಪಕ್ಕೆ ಮನೆಯ ನಂತರ ಶಿಕ್ಷಕರು ಪ್ರಮುಖ ಪಾತ್ರವಹಿಸುತ್ತಾರೆ ಎಂಬುದನ್ನು ಉದಾಹರಣೆಗಳ ಮೂಲಕ ಮನವರಿಕೆ ಮಾಡಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳಾ ಎಂ.ವಿ ವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಮೇಲ್ವಿಚಾರಕÀ ಮಾಧವ ಎಂ. ಉಪಸ್ಥಿತರಿದ್ದರು.
ವಿದ್ಯಾಥಿರ್üಗಳಾದ ಕ್ಷಿತಿ ಹಾಗೂ ಸಂಗಡಿಗರು ಪ್ರಾರ್ಥನೆ ಸಲ್ಲಿಸಿದರು. ಶಿಕ್ಷಕಿ ದಿವ್ಯಾ ಎನ್. ಸ್ವಾಗತಿಸಿದರು. ಧರ್ಮಸ್ಥಳ ವಲಯದÀ ಸೇವಾ ಪ್ರತಿನಿಧಿ ಎಸ್.ಮಹೇಶ್ ಕಾರ್ಯಕ್ರಮ ನಿರೂಪಿಸಿದರು. ಸ್ವಾಸ್ಥ್ಯ ಸಂಕಲ್ಪ ವೇದಿಕೆಯ ಕಾರ್ಯಕರ್ತ ಶ್ರೀನಿವಾಸ್ ರಾವ್ ಧನ್ಯವಾದ ಸಮರ್ಪಣೆ ಗೈದರು.