ಮುಂಬಯಿ, ಆ.09: ಅಮೇರಿಕಾ ಕಾಂಗ್ರೇಸ್ ಸೆನೆಟ್ ಸದಸ್ಯ ರಾಜ ಕೃಷ್ಣಮೂರ್ತಿ ಅವರು ಇಂದಿಲ್ಲಿ ಸೋಮವಾರ ಬೆಳಿಗ್ಗೆ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠದ ಭೇಟಿಗೈದರು.
ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠದ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನಮ್ ಶ್ರೀ ಸಂಪುಟ ನರಸಿಂಹಸ್ವಾಮಿ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಕೃಷ್ಣಮೂರ್ತಿ ಅವರನ್ನು ಶಾಲು ಹೊದಿಸಿ ಗೌರವಿಸಿ ಅನುಗ್ರಹಿಸಿದರು. ನಂತರ ಉಭಯ ರಾಷ್ಟ್ರಗಳ ಆಚಾರವಿಚಾರಗಳ ಬಗ್ಗೆ ಮಾತುಕತೆ ನಡೆಸಿ ಕುಶಲೋಪರಿ ನಡೆಸಿದ ಕೃಷ್ಣಮೂರ್ತಿ ಸ್ನೇಹ ಸಹಕಾರ, ಸ್ವಾಭಿಮಾನದ ಸಂಕೇತ ರಕ್ಷಾಬಂಧನ ಹಬ್ಬದ ಶುಭಾಶಯ ಹಾರೈಸಿದರು.