ಮುಂಬಯಿ, ಆ.24: ಮಂಗಳೂರು ಆಕಾಶವಾಣಿ ಕೇಂದ್ರದ ತುಳು ವಿಭಾಗದ `ಸಿರಿದೊಂಪ' ಕಾರ್ಯಕ್ರಮದಲ್ಲಿ ಇದೇ ಆಗಸ್ಟ್-27 ರಂದು ಸಾಯಂಕಾಲ 6.15 ನಿಮಿಷಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷ ಎ.ಸಿ ಭಂಡಾರಿ ಅವರೊಂದಿಗಿನ ಸಂದರ್ಶನ ಪ್ರಸಾರವಾಗಲಿದೆ.
ಆಕಾಶವಾಣಿ ಕೇಂದ್ರದ ತುಳು ವಿಭಾಗದ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ| ಸದಾನಂದ ಪೆರ್ಲ ಇವರನ್ನು ಸಂದರ್ಶಿಸಿದ್ದಾರೆ. ತುಳು ಕ್ಷೇತ್ರದಲ್ಲಿ 1970 ರಿಂದ ಅವಿರತ ದುಡಿದ ಭಂಡಾರಿಯವರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ವಿಶ್ವ ತುಳು ಸಮ್ಮೇಳನ, ತುಳು ಪರ್ಬ, ತುಳುನಾಡ ಜಾತ್ರೆಯಂತಹ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗಿಯಾದವರು.
ಭಂಡಾರಿ ಅವರು ತಮ್ಮ ಸೇವಾವಧಿಯಲ್ಲಿ ಕೈಗೊಳ್ಳುವ ವಿಶೇಷ ಕಾರ್ಯ ಯೋಜನೆಗಳ ಕುರಿತಾಗಿ ಸಂದರ್ಶನದಲ್ಲಿ ಬೆಳಕು ಚೆಲ್ಲಿದ್ದಾರೆ ಎಂದು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ಎಸ್. ಉಷಾಲತಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.