ಮುಂಬಯಿ, ಆ.31: ಕಳೆದ ಮಂಗಳವಾರ ಮುಂಬಯಿಯಲ್ಲಿ ಸುರಿದ ಭಾರೀ ಮಳೆಯ ವೇಳೆ ನಾಪತ್ತೆಯಾಗಿದ್ದ ನಗರದ ಹೆಸರಾಂತ ವೈದ್ಯ ಡಾ| ದೀಪಕ್ ಅಬ್ರಪುರ್ಕರ್ ಅವರ ಮೃತದೇಹವು ವರ್ಲಿ ಅಲ್ಲಿನ ಕಡಲ ತೀರದಲ್ಲಿ ಇಂದಿಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಪೆÇೀಲಿಸರು ಮಹಾಜರುಗಾಗಿ ಸಯಾನ್ನ ಸರಕಾರಿ ಆಸ್ಪತ್ರೆಗೆ ರವಾನಿಸಿ ಪೆÇೀಸ್ಟ್ಮರ್ಟಂ ನಡೆಸಿ ಮೃತರ ಕುಟುಂಬಕ್ಕೆ ಹಸ್ತಾಂತರಿಸಿದರು. ಮೃತದೇಹ ಶೀಘ್ರವೇ ಪತ್ತೆಹಚ್ಚುವಲ್ಲಿ ಅವರ ಕೈಯಲ್ಲಿದ್ದ ರಾಡೋ ವಾಚ್ ಕಾರಣವಾಗಿತು. ಚಿತ್ರ: ರೋನ್ಸ್ ಬಂಟ್ವಾಳ್