ಮುಂಬಯಿ, ಸೆ.01: ಚಿಕ್ಕಮಂಗಳೂರು ಅಲ್ಲಿನ ಮೂಡಿಗೆರೆಗೆ ಮಹಾಗಣಪತಿ ಉತ್ಸವದಲ್ಲಿ ಪಾಲ್ಗೊಳ್ಳಲು ಇಂದಿಲ್ಲಿ ಶುಕ್ರವಾರ ಭೇಟಿ ನೀಡಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ನ ಪ್ರಭಾವೀ ನಾಯಕ ಡಾ| ಕಲ್ಲಡ್ಕ ಪ್ರಭಾಕರ್ ಭಟ್ ಅವರು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಪತ್ರಕರ್ತರ ಭವನ ಸಮಿತಿ ಕಾರ್ಯಧ್ಯಕ್ಷ ಡಾ| ಶಿವ ಎಂ.ಮೂಡಿಗೆರೆ ಅವರ ನಿವಾಸಕ್ಕೆ ಭೇಟಿ ನೀಡಿದರು.
ಈ ವೇಳೆ ಡಾ| ಭಟ್ ಅವರೊಂದಿಗೆ ಕುಶಲೋಪರಿ ನಡೆಸಿ ಮುಂಬಯಿ ಮಹಾನಗರದಲ್ಲಿ ಶಿವ ಮೂಡಿಗೆರೆ ಅವರ ತುಳುಕನ್ನಡ ಪರ ಸೇವೆ ಮತ್ತು ಕಾರ್ಯವೈಖರಿ ತಿಳಿದು ಅಭಿನಂದಿಸಿದರು.