ಉಡುಪಿ ಕಡೆಕಾರು ಗ್ರಾಮದ ಕನ್ನರ್ಪಾಡಿಯ ದಿ| ಸುಬ್ಬರಾವ್ರವರ ಧರ್ಮಪತ್ನಿ ಶ್ರೀಮತಿ ಪದ್ಮಾವತಿ ಅಮ್ಮನವರು ಅಲ್ಪಕಾಲದ ಅಸೌಖ್ಯದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಅಂಬಲಪಾಡಿಯ ಹೈಟೆಕ್ ಆಸ್ಪತ್ರೆಯಲ್ಲಿ ದಿನಾಂಕ : 30.09.2017ರಂದು ನಿಧನ ಹೊಂದಿದರು. ಕಡೆಕಾರು ಗ್ರಾಮದ ದೊಡ್ಡ ಭೂ-ಹಿಡುವಳಿದಾರರಾದ ಇವರು ಭೂಸುಧಾರಣೆ ಕಾಯ್ದೆ ಜಾರಿಗೆ ಬಂದ ನಂತರ ಬಹುತೇಕ ಜಮೀನನ್ನು ಕಳೆದುಕೊಂಡಿದ್ದರು.
ಇವರು 100 ಸಂವತ್ಸರಗಳನ್ನು ಪೂರೈಸಿದ್ದು. ನಾಲ್ಕನೇ ತಲೆಮಾರಿನ ಮರಿಮೊಮ್ಮಗನನ್ನು ಕಂಡಿರುತ್ತಾರೆ. ಮೃತರು ಓರ್ವ ಮಗ ಹಾಗೂ ಮೂರು ಜನ ಪುತ್ರಿಯರು. ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.