ಮುಂಬಯಿ, ಅ.03: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಉಪಾಧ್ಯಕ್ಷ, ಸೇವಾ ದಳದ ಕಾರ್ಯಾಧ್ಯಕ್ಷ, ಭಾರತ್ ಬ್ಯಾಂಕ್ನ ಮಾಜಿ ನಿರ್ದೇಶಕ, ಮಲಾಡ್ ಕನ್ನಡ ಸಂಘ ಇದರ ಗೌರವ ಪ್ರಧಾನ ಕಾರ್ಯದರ್ಶಿ ಶಂಕರ್ ಡಿ.ಪೂಜಾರಿ ಇವರ ಮಾತೃಶ್ರೀ, ದಿ| ಸಾಂತೂರು ದೇಜು ಗುರುವ ಪೂಜಾರಿ ಇವರ ಧರ್ಮಪತ್ನಿ ಕಲ್ಯಾಣಿ ಡಿ.ಪೂಜಾರಿ (85.) ಕಳೆದ (ಸೆ.27) ಬುಧವಾರ ತನ್ನ ವೃದ್ಧಾಪ್ಯದಿಂದ ತಮ್ಮ ಸ್ವನಿವಾಸ ಉಡುಪಿಯ ಮೂಲ್ಕಿ ಪಿಲಾರು ಪಡುಸಾಂತೂರು ಇಲ್ಲಿನ ಕಲ್ಯಾಣಿ ನಿವಾಸದಲ್ಲಿ ನಿಧನರಾದರು.
ಮೃತರು ನಾಲ್ಕು ಗಂಡು, ಐದು ಹೆಣ್ಣು ಮಕ್ಕಳು, ಬಂಧುಬಳಗ ಅಗಲಿದ್ದಾರೆ. ಕಲ್ಯಾಣಿ ದೇಜು ಪೂಜಾರಿ ನಿಧನಕ್ಕೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಾರ್ಗದರ್ಶಕ ಜಯ ಸಿ.ಸುವರ್ಣ, ಮಲಾಡ್ ಕನ್ನಡ ಸಂಘದ ಅಧ್ಯಕ್ಷ ಹರೀಶ್ ಎನ್.ಶೆಟ್ಟಿ ಸೇರಿದಂತೆ ಉಭಯ ಸಂಸ್ಥೆಗಳ ಸರ್ವ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.