ಮಂಗಳೂರು: ಕರ್ನಾಟಕವನ್ನು ಎಂದಿಗೂ ಗುಜರಾತ್ ಮಾಡಲು ಬಿಜೆಪಿಗರಿಗೆ ಅವಕಾಶ ಮಾಡಿಕೊಡುವುದಿಲ್ಲ. ಅದು ಸಾಧ್ಯವೂ ಇಲ್ಲ ಎಂದು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಬುಧವಾರ ಮಂಗಳೂರಿನ ಸರ್ಕ್ಯೂಟ್ ಹೌಸ್ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕಕ್ಕೆ ಅದರದ್ದೆ ಆದ ಹಿನ್ನೆಲೆಯಿದೆ.
ಈ ಪರಂಪರೆಯನ್ನು ಉಳಿಸಿ ಬೆಳೆಸಲು ಜನತೆ ಬದ್ಧರಾಗಿದ್ದಾರೆ. ಆದರೆ, ಬಿಜೆಪಿಗರು ಚುನಾವಣಾ ಸಂದರ್ಭ ಜನರನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಾರೆ.ಆದರೆ, ಜನರು ಬಿಜೆಪಿಗರ ಮಾತಿನಿಂದ ಗೊಂದಲಕ್ಕಿಡಾಗಬಾರದು ಎಂದು ಮನವಿ ಮಾಡಿದ್ದಾರೆ.