Monday 6th, May 2024
canara news

ಕುಮಾರಿ ಲಾವಣ್ಯ, ಅಕ್ಷತ ಹಾಗೂ ಅಂಕಿತ ಭರತನಾಟ್ಯ ರಂಗಪ್ರವೇಶ

Published On : 23 Nov 2017   |  Reported By : Rons Bantwal


ಮುಂಬಯಿ, ನ. 23: ಕುಮಾರಿ ಲಾವಣ್ಯ ಎಸ್. ರಾವ್, ಕುಮಾರಿ ಅಕ್ಷತ ಎಸ್.ರಾವ್ ಮತ್ತು ಕುಮಾರಿ ಅಂಕಿತ ಎ.ಬಡಗೇರಿ ಅವರ ಭರತನಾಟ್ಯ ರಂಗಪ್ರವೇಶವು ಇತ್ತೀಚಿಗೆ ಮಾಟುಂಗದಲ್ಲಿನ ಮೈಸೂರು ಎಸೋಸಿಯೇಶನ್ ಸಭಾಗೃಹದಲ್ಲಿ ನೇರವೇರಿತು.

ಗುರು ಶ್ರೀಮತಿ ಹೇತಲ್ ಝವೇರಿ ಅವರ ಮಾರ್ಗದರ್ಶನದಲ್ಲಿ ನೇರವೇರಿದ ಸಮಾರಂಭದಲ್ಲಿ ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಇದರ ಅಧ್ಯಕ್ಷ ರಾಜ್‍ಕುಮಾರ್ ಕಾರ್ನಾಡ್, ವಿವೇಕ್ ಕಾಲೇಜ್ ಗೋರೆಗಾಂವ್ ಇದರ ಪ್ರಾಂಶುಪಾಲ ಶ್ರೀಮತಿ ವಿಜೇತ ಶೆಟ್ಟಿ, ಠಾಕೂರ್ ಕಾಲೇಜ್ ಪ್ರಾಧ್ಯಾಪಕಿ ಶ್ರೀಮತಿ ಅನಾಮಿಕ ಮಿಶ್ರಾ ಅವರು ಉಪಸ್ಥಿತರಿದ್ದು ಶುಭಾರೈಸಿದರು.

ಕುಮಾರಿ ಲಾವಣ್ಯ ಎಸ್. ರಾವ್, ಕುಮಾರಿ ಅಕ್ಷತ ಎಸ್.ರಾವ್ ಅವರು ಮೂಲತಃ ದಕ್ಷಿಣ ಕನ್ನಡದ ಕಾರ್ಕಳ ತಾಲೂಕಿನ ಸಂತೋಷ್ ರಾವ್ ಮತ್ತು ಸುರತ್ಕಲ್ ಹೊಸಬೆಟ್ಟು ಶ್ರೀಮತಿ ವೀಣಾ ಸಂತೋಷ್ ರಾವ್ ಅವರ ಸುಪುತ್ರಿಯಾರಾಗಿದ್ದು, ಅಂಕಿತ ಎ.ಬಡಗೇರಿ ಅವರು ಮೂಲತಃ ಹೊನ್ನಾವರ ಬಡಗೇರಿ ಅನಿಲ್ ಬಡಗೇರಿ ಮತ್ತು ಜ್ಯೋತಿ ಬಡಗೇರಿ ಅವರ ಸುಪುತ್ರಿಯಾಗಿದ್ದಾರೆ.




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here