ಕುಂದಾಪುರ, ನ.24: ‘ಕ್ರೀಡೆ ಮತ್ತು ಪಾಠ ಒಂದೇ ನಾಣ್ಯಾದ ಎರಡು ಮುಖಗಳು, ಹಾಗಾಗಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿಯೂ ಭಾಗವಹಿಸಿ ಬೇಕು, ಮಾತ್ರವಲ್ಲಾ, ಕ್ರೀಡೆಯಲ್ಲಿ ಸಾಧನೆ ಮಾಡಲು ಬಹಳ ಶ್ರಮ ಪಡಬೇಕು, ಕಠಿಣವಾದ ಶ್ರಮ ಪಟ್ಟು ಉತ್ತಮವಾವ ಕ್ರೀಡಾ ಪಟುಗಳಾ ಬೇಕು’ ಎಂದು ರೋಟರೆಯಿನ್ ಸೇನಾನಿ, ಕ್ರೀಡಾ ಪಟು ಮನೋಜ್ ನಾಯರ್, ಸಂತ ಜೋಸೆಫ್ ಫ್ರೌಡ ಶಾಲೆಯ ವಾರ್ಷಿಕ ಕ್ರೀಡೊತ್ಸವನ್ನು ಶಾಲಾ ಮೈದಾನದಲ್ಲಿ ಕ್ರೀಡಾ ದೀಪವನ್ನು ಬೆಳಗಿಸಿ ಅವರು ಮಕ್ಕಳಿಗೆ ಸಂದೇಶ ನೀಡಿದರು.
ವಿಧ್ಯಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಭಗಿನಿ ಕೀರ್ತನ ಶಾಲ ದ್ವಜಾ ರೋಹಣವನ್ನು ಮಾಡಿ ‘ವಿದ್ಯಾರ್ಥಿಗಳು ಕ್ರೀಡೆ ಮತ್ತು ಪಾಠಗಳಲ್ಲಿ ಸಮಾನವಾಗಿ ಆಸಕ್ತಿ ವಹಿಸಿಕೊಳ್ಳ ಬೇಕು’ ಎಂದರು. ಶಾಲಾ ಮುಖ್ಯೋಪಾಧ್ಯನಿ ಭಗಿನಿ ವಾಯ್ಲೆಟ್ ತಾವ್ರೊ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಭಗಿನಿ ಸಿಲ್ವಿಯಾ ಕ್ರೀಡಾಗಳ ಪಥ ಸಂಚಲವನ್ನು ನೆಡಿಸಿಕೊಟ್ಟರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸತೀಶ ಮೇಸ್ತಾ ಮತ್ತು ಇತರ ಮಕ್ಕಳ ಪೆÇೀಷಕರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ಮೈಕಲ್ ಪುಟಾರ್ಡೊ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು. ಶಿಕ್ಷಕ ಅಶೋಕ ದೇವಾಡಿಗ ಸ್ವಾಗತಿಸಿ ವಂದಾನಾರ್ಪಣೆಯನ್ನು ಸಲ್ಲಿಸಿದರು.