ಮಂಗಳೂರು : ಮಹತ್ವದ ಕಾರ್ಯಚರಣೆಯೊಂದರಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಇತ್ತೀಚೆಗೆ ನಡೆದ ಶೂಟೌಟ್ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಶೂಟೌಟ್ ಪ್ರಕರಣಕ್ಕೆ ಸಂಭಂಧಿಸಿದಂತೆ ಭೂಗತ ಪಾತಕಿ ಕಲಿ ಯೋಗಿಶ್ ನ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಚಂದ್ರಶೇಖರ್ ಹಾಗೂ ಮನೋಜ್ ಕುಂದರ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಪಿಸ್ತೂಲು, ಸಜೀವಗುಂಡು, ದ್ವಿಚಕ್ರ ವಾಹನ ಸೇರಿದಂತೆ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿರುವ ಸಂಜೀವ ಶೆಟ್ಟಿ ಬಟ್ಟೆ ಮಳಿಗೆ ಹಾಗೂ ಮುಲ್ಕಿಯಲ್ಲಿ ಉದ್ಯಮಿ ನಾಗರಾಜ್ ಅವರ ಮನೆಯ ಮೇಲೆ ಇತ್ತಿಚೆಗೆ ಶೂಟೌಟ್ ನಡೆಸಲಾಗಿತ್ತು.
ಈ 2 ಪ್ರಕರಣ ಸೇರಿದಂತೆ ಕಿನ್ನಿಗೋಳಿಯ ಆಭರಣ ಮಳಿಗೆಗೆ ಸಜೀವ ಗುಂಡುಗಳನ್ನು ಎಸೆದ ಪ್ರಕರಣವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ಈ ಕೃತ್ಯಗಳನ್ನು ಭೂಗತ ಪಾತಕಿ ಕಲಿ ಯೋಗಿಶ್ ಗ್ಯಾಂಗ್ ಎಸಗಿರುವುದು ಈಗ ಬಯಲಾಗಿದೆ.