`ಪದ್ಮಭೂಷಣ ವಸಂತ್ದಾದಾ ಪಾಟೀಲ್ ಉತ್ಕೃಷ್ಟ ಸಹಕಾರಿ ಬ್ಯಾಂಕ್ ಪುರಸ್ಕಾರ' ಮುಡಿಗೇರಿಸಿಕೊಂಡ ಭಾರತ್ ಬ್ಯಾಂಕ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಫೆ.08: ದಿ.ಮಹಾರಾಷ್ಟ್ರ ಸ್ಟೇಟ್ ಕೋ.ಆಪರೇಟಿವ್ ಬ್ಯಾಂಕ್'ಸ್ ಅಸೋಸಿಯೇಶನ್ ಲಿಮಿಟೆಡ್ ಮುಂಬಯಿ) ಸಂಸ್ಥೆ ವಾರ್ಷಿಕವಾಗಿ ಪ್ರದಾನಿಸುವಂತೆ ಈ ಬಾರಿ 2016-2017ರ ಹಣಕಾಸು ಸಾಲಿನ ಪ್ರಶಸ್ತಿಗಳನ್ನು ಪ್ರದಾನಿಸಿದ್ದು ತುಳು-ಕನ್ನಡಿಗರ ಪ್ರತಿಷ್ಠಿತ ಹಣಕಾಸು ಸಂಸ್ಥೆ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಸಂಸ್ಥೆಗೆ ಈ ಬಾರಿ `ಪದ್ಮಭೂಷಣ ವಸಂತ್ದಾದಾ ಪಾಟೀಲ್ ಉತ್ಕೃಷ್ಟ ಸಹಕಾರಿ ಬ್ಯಾಂಕ್ ಪುರಸ್ಕಾರ' ಪ್ರಶಸ್ತಿಯನ್ನಿತ್ತು ಗೌರವಿಸಿತು.
ಇಂದಿಲ್ಲಿ ಗುರುವಾರ ದಾದರ್ ಪ್ರಭಾದೇವಿ ಅಲ್ಲಿನ ಮಹಾರಾಷ್ಟ್ರ ಕಲಾ ಅಕಾಡೆಮಿಯ ರವೀಂದ್ರ ನಾಟ ಮಂದಿರದ ಸಭಾಗೃಹದಲ್ಲಿ ಬ್ಯಾಂಕ್'ಸ್ ಅಸೋಸಿಯೇಶನ್ ಆಯೋಜಿಸಿರುವ 22ನೇ ವಾರ್ಷಿಕ ಪಾರಿತೋಷಕ ವಿತರಣಾ ಭವ್ಯ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನಿಸಿದ್ದು, ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಉಪಸ್ಥಿತ ಮಹಾರಾಷ್ಟ್ರ ರಾಜ್ಯ ವಿಧಾನ ಪರಿಷದ್ನ ಉಪ ಸಭಾಪತಿ ಮಾಣಿಕ್ರಾವ್ ಠಾಕ್ರೆ ಅವರು ಅಸೋಸಿಯೇಶನ್ನ ಕಾರ್ಯಾಧ್ಯಕ್ಷ ಶರದ್ ಅಪ್ಪರಾವ್ ಗೊೈಂದ್ ಅವರನ್ನೊಳಗೊಂಡು ಭಾರತ್ ಬ್ಯಾಂಕ್ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲ್ಯಾನ್ ಹಾಗೂ ಸಿಇಒ-ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ ಅವರಿಗೆ ಪುರಸ್ಕಾರ ಫಲಕ, ಪ್ರಶಸ್ತಿಪತ್ರ ಪ್ರದಾನಿಸಿ ಅಭಿನಂದಿಸಿದರು.
ಈ ಶುಭಾವಸರದಲ್ಲಿ ಬ್ಯಾಂಕ್'ಸ್ ಅಸೋಸಿಯೇಶನ್ನ ಉಪ ಕಾರ್ಯಾಧ್ಯಕ್ಷ ಹರಿಹರ್ರಾವ್ ವಿ.ಭೊಸೀಕರ್, ಸಿಇಒ ಸ್ವಾತಿ ಪಾಂಡೆ ಮತ್ತು ಸಂಚಾಲಕರನೇಕರು, ಭಾರತ್ ಬ್ಯಾಂಕ್ನ ಹಿರಿಯ ನಿರ್ದೇಶಕಿ ಪುಷ್ಫಲತಾ ಎನ್. ಸಾಲ್ಯಾನ್, ಮಾಜಿ ನಿರ್ದೇಶಕ ಎನ್.ಎಂ ಸನೀಲ್, ಮಹಾ ಪ್ರಂಬಧಕ ದಿನೇಶ್ ಬಿ.ಸಾಲ್ಯಾನ್, ಉಪ ಪ್ರಧಾನ ಪ್ರಬಂಧಕ ಮೋಹನ್ದಾಸ್ ಹೆಜ್ಮಾಡಿ (ಬ್ಯಾಂಕ್ನ ಅಭಿವೃದ್ಧಿ ಮುಖ್ಯಸ್ಥ) ವೇದಿಕೆಯಲ್ಲಿ ಉಪಸ್ಥಿತರಿದ್ದು ಹರ್ಷ ವ್ಯಕ್ತಪಡಿಸಿದರು.
ಮಹಾರಾಷ್ಟ್ರ ರಾಜ್ಯದ ಪ್ರತಿಷ್ಠಿತ ಮಾಜಿ ಮುಖ್ಯಮಂತ್ರಿ, ಸಹಕಾರ ಮಹಾರ್ಷಿ ಬಿರುದಾಂಕಿತ ಪದ್ಮಭೂಷಣ ವಸಂತ್ದಾದಾ ಪಾಟೀಲ್ ನಾಮದ ಸರ್ವೋತ್ಕೃಷ್ಟ ಸಹಕಾರಿ ಗೌರವಕ್ಕೆ ಭಾರತ್ ಬ್ಯಾಂಕ್ ಭಾಜನವಾಗಿರÀುವು ದು ಅಭಿಮಾನ ತಂದಿದೆ. ವಿಶೇಷವಾಗಿ ಈ ಗೌರವವು ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರ ಅಹರ್ನಿಶಿ ಶ್ರಮ ಹಾಗೂ ದೂರದೃಷ್ಠಿತ್ವದ ಚಿಂತನೆಯ ಫಲವಾಗಿದೆ. ಹಾಗೂ ಬ್ಯಾಂಕ್ ಮಂಡಳಿ ಮತ್ತು ಷೇರುದಾರದ ಸಹಕಾರ, ಗ್ರಾಹಕರ ಅನನ್ಯ ಸಹಯೋಗ ಮತ್ತು ನೌಕರವೃಂದದ ಅನುಪಮ ಪರಿಶ್ರಮದ ಧ್ಯೋತಕವಾಗಿದೆ ಎಂದು ನ್ಯಾ| ರೋಹಿಣಿ ಜೆ.ಸಾಲ್ಯಾನ್ ತಿಳಿಸಿದರು.
ಅಸೋಸಿಯೇಶನ್ ವರ್ಷಂಪ್ರತಿ ಆಯ್ಕೆಗೊಳಿಸುವ ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಮತ್ತು ಗುಣಮಟ್ಟದ ಬ್ಯಾಂಕ್ಗಳ ಸ್ಪರ್ಧೆಯಲ್ಲಿ ನೂರಾರು ಸಹಕಾರಿ ಬ್ಯಾಂಕುಗಳ ಪೈಕಿ ನಿರ್ಣಾಯಕರ ಆಯ್ಕೆ ಪ್ರಕ್ರಿಯೆಯಂತೆ ಭಾರತ್ ಬ್ಯಾಂಕ್ಗೆ ಈ ಗೌರವ ಪ್ರಾಪ್ತಿಸಿರುವುದು ನಮ್ಮನ್ನು ಮತ್ತಷ್ಟು ಪೆÇ್ರೀತ್ಸಹಿಸಿದಂತಾಗಿದೆ. ಭಾರತ್ ಬ್ಯಾಂಕ್ನ ಸರ್ವೋತ್ಕೃಷ್ಟ ಗ್ರಾಹಕ ಸೇವೆ, ಸಮಗ್ರ ವ್ಯವಹಾರ ಮತ್ತು ಗ್ರಾಹಕಸ್ನೇಹಿ ವಾರ್ಷಿಕ ವೈಶಿಷ್ಟ್ಯಪೂರ್ಣ ಚಟುವಟಿಕೆಗಳಿಗಾಗಿ ಗೌರವಿಸಲ್ಪಟ್ಟಿರುವು ಹೆಮ್ಮೆಯೆಣಿಸಿದೆ ಎಂದು ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ ತಿಳಿಸಿದರು.