ಮಂಗಳೂರು: ದೇಶದ ಸರ್ವೋಚ್ಚ ನ್ಯಾಯಾಲಯವೂ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆ, ಹತ್ಯೆ, ಹಾಗೂ ಅಪರಾಧಗಳನ್ನು ಅತ್ಯಂತ ಕಠಿಣ ಶಬ್ಧಗಳಿಂದ ಟೀಕಿಸಿದ್ದು, ಈ ವಿಚಾರವಾಗಿ ಮಹತ್ವದ ಆದೇಶ ಹೊರಡಿಸಿದೆ. ಕೋಮುವಿನ ಹೆಸರಿನಲ್ಲಿ ಯಾವುದೇ ಹತ್ಯೆ ನಡೆಸುವಂತಿಲ್ಲ.
ಒಂದು ವೇಳೆ ಅಂತಹ ಹತ್ಯೆ ನಡೆದರೆ ಅದನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ ಹಾಗೂ ಯಾವುದೇ ನ್ಯಾಯಾಲಯವು ಯಾವುದೇ ಧರ್ಮವೊಂದರ ಮೇಲೆ ಮೃಧು ಧೋರಣೆ ಹೊಂದುವಂತಿಲ್ಲ ಎಂದು ಖಡಕ್ ಆದೇಶ ನೀಡಿದೆ. ಇದಲ್ಲದೆ ಕೋಮು ಗಲಭೆಯ ಪ್ರಕರಣಗಳಲ್ಲಿ ಪೂರ್ವಾಗೃಹಪೀಡಿತರಾಗಿ ತೀರ್ಪು ನೀಡುವಂತಿಲ್ಲ ಎಂದು ಆದೇಶದಲ್ಲಿ ಹೇಳಿದೆ.