ಮುಂಬಯಿ, ಫೆ:19: ಮಂಗಳೂರುನ ತನ್ನೀರು ಬಾವಿ ಬುದ್ಧಾರ್ ತೋಟ ಮನೆಯ ವಿಠ್ಠಲ್ ಪರಮೇಶ್ವರ ಕರ್ಕೇರ (80.) ಅವರು ಆಕಾಶ್ ಭವನ್ ಇಲ್ಲಿನ ತಮ್ಮ ಸ್ವಗೃಹ ಸುಪ್ರಭಾತ ನಿವಾಸದಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ಕಳೆದ ರವಿವಾರ (ಫೆ.18) ನಿಧನರಾದರು.
ದಿವಂಗತರು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಉಪಾಧ್ಯಕ್ಷ, ಭಾರತ್ ಬ್ಯಾಂಕ್ನ ಮಾಜಿ ನಿರ್ದೇಶಕ ರಾಜಾ ವಿ.ಸಾಲ್ಯಾನ್ ಅವರ ಭಾವ ಆಗಿದ್ದ ಮೃತರು ಪತ್ನಿ ರಾಜೀವಿ ವಿ.ಕರ್ಕೇರ ಸೇರಿದಂತೆ ನಾಲ್ಕು ಗಂಡು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.