ಮಂಗಳೂರು:ಅಖಿಲ ಭಾರತ ಬ್ಯಾರಿ ಪರಿಷತ್ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಡೆಯಿತು.
ಸಮಿತಿಯ ನೂತನ ಅಧ್ಯಕ್ಷರಾಗಿ ಜೆ. ಹುಸೈನ್ ಜೋಕಟ್ಟೆ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಬಿ.ಎ. ಮಹಮ್ಮದ್ ಹನೀಫ್, ಪ್ರಧಾನ ಕಾರ್ಯದರ್ಶಿಯಾಗಿ ಯೂಸುಫ್ ವಕ್ತಾರ್, ಉಪಾಧ್ಯಕ್ಷರಾಗಿ ಮಹಮ್ಮದ್ ಕುಂಜತ್ತಬೈಲ್, ಟಿ.ಂ. ಸಹೀದ್ ಸುಳ್ಯ, ಅಬ್ದುಲ್ ಲತೀಫ್ ಕಂದಕ್, ಅಹ್ಮದ್ ಬಾವ ಬಜಾಲ್, ಹಮೀದ್ ಕೃಷ್ಣಾಪುರ, ಸಾಲಿ ಮಲವೂರು. ಕಾರ್ಯಾಧ್ಯಕ್ಷರಾಗಿ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್, ಮುಖ್ಯ ಸಲಹೆಗಾರರಾಗಿ ಬಿ.ಎಂ. ಮುಮ್ತಾಝ್ ಅಲಿ, ಅಬ್ದುಲ್ ಮಜೀದ್ ಸೂರಲ್ಪಾಡಿ, ಹಾರೀಸ್ ಮುಕ್ಕ, ಕೋಶಾಧಿಕಾರಿಯಾಗಿ ವಿ. ಮೊಹಮ್ಮದ್ ಬಜ್ಪೆ, ಸಂಘಟನಾ ಕಾರ್ಯದರ್ಶಿಯಾಗಿ ಬಶೀರ್ ಕಲ್ಕಟ್ಟ, ಹಮೀದ್ ಕಿನ್ಯ, ಅಬೂಬಕರ್ ಪಲ್ಲಮಜಲ್, ಇಬ್ರಾಹಿಂ ನಡುಪದವು, ಕರೀಂ ಮಲ್ಲೂರು, ಅಬ್ದುಲ್ ಬಶೀರ್ ಮೊಂಟೆಪದವು, ಬಿ.ಎ. ಅಬೂಬಕರ್ ಕಲ್ಲಾಡಿ ಸೇರಿದಂತೆ ಇತರ ೧೮ ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು.