ಮುಂಬಯಿ, ಜೂ.02: ಉಪನಗರ ಖಾರ್ ಪೂರ್ವದಲ್ಲಿನ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಗೌರವ ಅಧ್ಯಕ್ಷ ಶ್ರೀಧರ್ ಜೆ.ಪೂಜಾರಿ ಅವರು ಕಳೆದ ಸೋಮವಾರ ತನ್ನ ಅಮೃತಜನ್ಮೋತ್ಸವ ಆಚರಿಸಿದರು. 75ನೇ ವರ್ಷದ ಹುಟ್ಟುಹಬ್ಬದ ವಿಶೇಷ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದÀಲ್ಲಿ ಖಾರ್ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಗೌ| ಪ್ರ| ಕಾರ್ಯದರ್ಶಿ, ಯೋಗೇಶ್ ಕೆ ಹೆಜ್ಮಾಡಿ, ಸೇವಾಕÀರ್ತರಾದ ಹರೀಶ್ ಕುಮಾರ್ ಕೋಟ್ಯಾನ್ ಕಾಪು, ನರಸಿಂಹ ಎನ್ ಸಾಲ್ಯಾನ್, ಇನ್ನಿತರರು ಉಪಸ್ಥಿತರಿದ್ದು ಮಂಗಳುರು ಮಲ್ಲಿಗೆ ಹಾರವನ್ನಿತ್ತು, ಪೇಟ ಧರಿಸಿ ಶಾಲು ಹೊದಿಸಿ ಗೌರವಿಸಿದರು. ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಶಾರದಾ ಎಸ್ ಪೂಜಾರಿ, ಮಕ್ಕಳು , ಅಳಿಯಂದಿರು ಹಾಗೂ ಪರಿವಾರ ಸದಸ್ಯರು ಹಾಜರಿದ್ದು ಗೌರವಿಸಿದರು.