ಕೈರಂಗಳ:ಇಲ್ಲಿನ ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ಇದರ ವತಿಯಿಂದ ಶಾಲಾ ವಿಧ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವು ಕೈರಂಗಳ ಅ.ಹಿ.ಪ್ರಾ ಶಾಲೆಯಲ್ಲಿ ಜರುಗಿತು.
ಕಾರ್ಯಕ್ರಮಕ್ಕೆ ಜೆ.ಎಂ.ಆರ್ ಪಡಿಕ್ಕಲ್ ಖತೀಬ್ ನಾಸೀರುದ್ದೀನ್ ಮದನಿ ದುವಾ ಮೂಲಕ ಚಾಲನೆ ನೀಡಿದರು.ಶಾಲಾ ಮುಖ್ಯೋಪಾಧ್ಯಾಯರಾದ ಶಿವರಾಮ್ ಭಟ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದ ಉಧ್ಘಾಟನೆಯನ್ನು,ತಾ.ಪಂ ಸದಸ್ಯರಾದ ಹೈದರ್ ಕೈರಂಗಳ ಉಧ್ಘಾಟಿಸಿ ಮಾತನಾಡುತ್ತಾ ಅಲ್-ಅಮೀನ್ ಸಂಸ್ಥೆ ಯು ನಿಷ್ಕಂಳಕ ಮನಸ್ಸಿನಿಂದ ಸಮಾಜಕ್ಕೆ ಅರ್ಪಿಸುತ್ತಿರುವ ಸೇವೆಯು ಮಹತ್ತರವಾಗಿದೆ,ಸಂಸ್ಥೆಯ ಕಾರ್ಯಚಟುವಟಿಕೆಗಳು ಶ್ಲಾಘನೀಯ ಎಂದರು.
ಕಾರ್ಯಕ್ರಮ ದಲ್ಲಿ ತೋಟಾಲ್ ಜುಮಾ ಮಸ್ಜಿದ್ ಖತೀಬ್ ಮುಹಿಯ್ಯದ್ದೀನ್ ಸಹದಿ ತೋಟಾಲ್,ನರಿಂಗಾನ ಗ್ರಾ.ಪಂ ಸದಸ್ಯರಾದ ಮುರಳೀಧರ್ ಶೆಟ್ಟಿ ಮೋರ್ಲ,ಕೈರಂಗಳ ಗ್ರಾ.ಪಂ ಸದಸ್ಯ ಲೋಹಿತ್.ವಿ ಗಟ್ಟಿ,ಸಂಸ್ಥೆಯ ಗೌರವಾಧ್ಯಕ್ಷ ಅಹ್ಮದ್ ಕುಂಙಿ, ಸಮಾಜಸೇವಕ ರಹಿಮಾನ್ ಹೂಹಾಕುವ ಕಲ್ಲು,ಗೌಸಿಯಾ ಯಂಗ್ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಇಬ್ರಾಹಿಂ ಪಾರೆ,ಬದ್ರುಲ್ ಹುದಾ ಅಸೋಸಿಯೇಷನ್ ಅಧ್ಯಕ್ಷ ಪೈಝಲ್ ಪಡಿಕ್ಕಲ್,ಅನ್ಸಾರ್ ಪಡಿಕ್ಕಳ್,ಸ್ಥಳೀಯರಾದ ಹೈದರ್ ಮಲಿ,ಶಾಕಿರ್,ಇಬ್ರಾಹಿಂ, ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ಅಧ್ಯಕ್ಷ ಹಂಝ.ಬಿ ಮತ್ತಿತರು ಉಪಸ್ಥಿತರಿದ್ದರು.
ಬಳಿಕ ಕೈರಂಗಳ ಶಾಲಾ ಮುಖ್ಯೋಪಾಧ್ಯಾಯ ರಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಶಿವರಾಮ್ ಭಟ್ ರವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು.
ಉಪಾಧ್ಯಕ್ಷ ಜಾಬಿರ್ ತೋಟಾಲ್ ಸ್ವಾಗತಿಸಿ ಶಿನಾನ್ ಸುಟ್ಟ ನಿರೂಪಣೆಗೈದರು.